ಬೆಂಗಳೂರು: ನಿವೃತ್ತ ಪ್ರೊಫೆಸರ್ ಒಬ್ಬರ ಹತ್ಯೆ ಪ್ರಕರಣದ ಹಿನ್ನಲೆಯಲ್ಲಿ ಖ್ಯಾತ ಗಾಯಕಿ ಅನನ್ಯ ಭಟ್ರ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
7 ಲಕ್ಷಕ್ಕೆ ಸುಪಾರಿ ನೀಡಿ ನಿವೃತ್ತ ಪ್ರೊಫೆಸರ್ ಪರಶಿವಮೂರ್ತಿ ಕೊಲೆ ಮಾಡಿಸಿದ್ದ ವಿಶ್ವನಾಥ್ ಭಟ್ರನ್ನೂ ಸೇರಿ ಐವರು ಆರೋಪಿಗಳನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಕೊಲೆಗಾಗಿ ಇಬ್ಬರನ್ನು ಇವರು ಬಳಸಿರುವುದಾಗಿ ತಿಳಿದು ಬಂದಿದ್ದು ಸಹ ಶಿಕ್ಷಕ ಪರಶಿವ ಹಾಗೂ ಸ್ನೇಹಿತ್ ಸಿದ್ದರಾಜು ಪ್ರೊಫೆಸರ್ ಪರಶಿವಮೂರ್ತಿಯವರ ಕೊಲೆಗೆ ಸಾಥ್ ನೀಡಿದ್ದಾರೆ. ನಿರಂಜನ್ ಹಾಗೂ ನಾಗೇಶ್ ಸುಪಾರಿ ಪಡೆದು ಕೊಲೆ ಮಾಡಿದ ಹಂತಕರಾಗಿದ್ದಾರೆ.
20/09/2020ರಂದು ಮೈಸೂರಿನ ಶಾರದಾ ನಗರದಲ್ಲಿ ಕೊಲೆ ನಡೆದಿದ್ದು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ನಡೆಸಿದ ಪೊಲೀಸರು ವಿಶ್ವನಾಥ್ ಭಟ್ರನ್ನು ಬಂಧಿಸಿದ್ದಾರೆ. ಕೊಲೆಯಾದ ಪರಶಿವಮೂರ್ತಿ ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿಯಾಗಿದ್ದು ಪ್ರತಿ ತಿಂಗಳು ಕಮಿಷನ್ಗಾಗಿ ಪೀಡಿಸುತ್ತಿದ್ದರೆಂಬ ಆರೋಪವಿದೆ. ಇದೇ ಟಾರ್ಚರ್ನ ಕಾರಣವಾಗಿ ಕೊಲೆ ನಡೆದಿರುವುದಾಗಿ ತಿಳಿದು ಬಂದಿದೆ. ಪೀಡಿಸುವುದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರಿಂದ ಮನನೊಂದ ವಿಶ್ವನಾಥ್ ಭಟ್ ಕೊಲೆಗೆ ಸುಪಾರಿ ನೀಡಿದ್ದಾರೆ.
ಕೊಲೆಗೆ ಸಹ ಶಿಕ್ಷಕ ಪರಶಿವ ಹಾಗೂ ಸ್ನೇಹಿತ್ ಸಿದ್ದರಾಜು ಸಾಥ್ ನೀಡಿದ್ರು ಎಂದು ತಿಳಿದು ಬಂದಿದೆ. ಸಂಸ್ಕೃತ ಪಾಠ ಶಾಲೆ ಕಾರ್ಯದರ್ಶಿಯಾಗಿದ್ದ ಪರಶಿವಮೂರ್ತಿ, ಕಮಿಷನ್ಗಾಗಿ ಪೀಡಿಸುತ್ತಿದ್ದನೆಂಬ ಆರೋಪವಿದೆ. ಇದ್ರಿಂದ ಮನನೊಂದು ಅನನ್ಯಭಟ್ ತಂದೆ ವಿಶ್ವನಾಥ್ ಭಟ್ ಪರಶಿವಮೂರ್ತಿ ಕೊಲೆಗೆ ಸುಪಾರಿ ನೀಡಿದ್ರು ಎಂದು ತಿಳಿದು ಬಂದಿದೆ. ಹೀಗಾಗಿ ವಿಶ್ವನಾಥ್ ಭಟ್ ಕೊಲೆಗೆ ಸ್ಕೆಚ್ ಮಾಡೇ ಬಿಟ್ರು. ಸೆಪ್ಟೆಂಬರ್ 20ರಂದು ಮೈಸೂರಿನ ನಿವೇದಿತಾ ನಗರದಲ್ಲಿ ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿಯ ಹತ್ಯೆಯಾಗಿತ್ತು. ನಿರಂಜನ್, ನಾಗೇಶ್ ಸುಪಾರಿ ಪಡೆದು ಕೊಲೆ ಮಾಡಿದ್ರು. ಕೇಸ್ ದಾಖಲಿಸಿ ತನಿಖೆ ನಡೆಸಿದ್ದ ಸರಸ್ವತಿಪುರಂ ಠಾಣೆ ಪೊಲೀಸರು, ವಿಚಾರಣೆ ಮುಂದುವರೆಸಿದ್ದಾರೆ. ಇನ್ನು, 2 ವರ್ಷಗಳಿಂದ ವಿಶ್ವನಾಥ್ ಭಟ್ ಪತ್ನಿ, ಮಗಳನ್ನು ಬಿಟ್ಟು ಬೇರೆ ವಾಸವಿದ್ದಾರೆ ಎಂದು ತಿಳಿದು ಬಂದಿದೆ.
Comments are closed.