ಕರ್ನಾಟಕ

ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭ ಮತ್ತಷ್ಟು ವಿಳಂಬಕ್ಕೆ ನಿರ್ಧಾರ: ಆರೋಗ್ಯ ಇಲಾಖೆ ಡೈರೆಕ್ಟರ್​​​ ಡಾ.ಪಾಟೀಲ್ ಓಂ ಪ್ರಕಾಶ್​

Pinterest LinkedIn Tumblr


ಬೆಂಗಳೂರು: ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲಾ -ಕಾಲೇಜುಗಳ ಆರಂಭಕ್ಕೆ ಇನ್ನೂ ಒಂದು ತಿಂಗಳು ವಿಳಂಬವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಅಕ್ಟೋಬರ್​ ಅಂತ್ಯದವರೆಗೂ ಸ್ಕೂಲ್​​ ಓಪನ್​​ ಮಾಡುವುದಿಲ್ಲವೆಂದು ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಹೇಳಿದ್ದಾರೆ.

ರಾಜ್ಯದಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆ ಶಾಲೆ ಆರಂಭ ಮಾಡದಿರಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಡೈರೆಕ್ಟರ್​​​ ಡಾ.ಪಾಟೀಲ್ ಓಂ ಪ್ರಕಾಶ್​ ಹೇಳಿದ್ದಾರೆ.

ಸದ್ಯ ಸ್ಕೂಲ್​-ಕಾಲೇಜ್​ ಓಪನ್​ ಮಾಡೋ ಸ್ಥಿತಿ ರಾಜ್ಯದಲ್ಲಿ ಇಲ್ಲ. ಕೇಂದ್ರ ಸರ್ಕಾರ ಗ್ರೀನ್​​ ಸಿಗ್ನಲ್​​ ಕೊಟ್ರೂ ರಾಜ್ಯಗಳ ವಿವೇಚನೆಗೆ ಬಿಟ್ಟಿದೆ. ಪರಿಸ್ಥಿತಿ ಅವಲೋಕನ ಮಾಡಿ ಮುಂದಿನ‌ ನಿರ್ಧಾರ ಮಾಡ್ತೇವೆ ಅಂತ ಪಾಟೀಲ್​​ ಓಂ ಪ್ರಕಾಶ್ ತಿಳಿಸಿದ್ದಾರೆ.

Comments are closed.