ಕರ್ನಾಟಕ

ಬಾಗಲಕೋಟೆ: ನಿರಂತರ ಸುರಿಯುತ್ತಿರುವ ಮಳೆ, ಹಳ್ಳದಲ್ಲಿ ಕೊಚ್ಚಿ ಹೋದ ಯುವಕ`

Pinterest LinkedIn Tumblr


ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಒಂಟಗೋಡಿ ಗ್ರಾಮದಲ್ಲಿ ಭಾರಿ‌ ಮಳೆಯಿಂದ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಯುವಕನೊಬ್ಬ ಕೊಚ್ಚಿ ಹೋದ ಘಟನೆ ನಡೆದಿದೆ‌. ಕೊಚ್ಚಿ ಹೋಗಿ ಮೃತಪಟ್ಟ ಯುವಕನನ್ನು ಸಂತೋಷ ಅಡವಿ (30) ಎಂದು ಗುರುತಿಸಲಾಗಿದೆ.

ಈತ ಹೊಲದಿಂದ ಬೈಕ್ ನಲ್ಲಿ ವಾಪಸ್ಸಾಗುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ರಸ್ತೆ ಪಕ್ಕದ ಹಳ್ಳದಲ್ಲಿ ಬಿದ್ದಿದ್ದಾನೆ. ನಂತರ ಸಮೀಪದಲ್ಲೇ ಈತನ ಶವ ದೊರೆತಿದೆ. ಮುಧೋಳ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಇಳಕಲ್‌ ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ನಾನಾ ಬಡಾವಣೆಗಳ 6 ಮನೆಗಳು ಕುಸಿದು ಜನರು ತತ್ತರಿಸಿದ್ದಾರೆ.

ವಾರ್ಡ್‌. ನಂ.7, 6 ಹಾಗೂ 3ರಲ್ಲಿ ತಲಾ 2 ಮನೆಗಳು ಕುಸಿದಿದ್ದು, ಈ ಕುಟುಂಬಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕಂದಾಯ ನಿರೀಕ್ಷಕ ನವೀನ ಬಲಕುಂದಿ, ಗ್ರಾಮಲೆಕ್ಕಾಧಿಕಾರಿ ಶ್ರೀಧರ ವಿಶ್ವಕರ್ಮ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಹಸೀಲ್ದಾರ್‌ ಅವರಿಗೆ ವರದಿ ಸಲಿಸಿದ್ದಾರೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ರಸ್ತೆ ಬದಿ ಚರಂಡಿಗಳು ತುಂಬಿ ಹೋಗಿ ನೀರು ರಸ್ತೆಗಳನ್ನು ಆವರಿಸಿದೆ. ಇಡೀ ರಸ್ತೆಗಳು ಚರಂಡಿನೀರು, ಹಾಳಿ, ಕಸದಿಂದ ತುಂಬಿ ಹೋಗಿವೆ.

Comments are closed.