ಕರ್ನಾಟಕ

ಮದ್ಯ ಸಿಕ್ಕ ಖುಷಿಯಲ್ಲಿ ದೇವರ ಗುಡಿ ಮುಂದೆ ಬಾಟಲ್ ಇಟ್ಟು ಧ್ಯಾನ ಮಾಡಿದ ವ್ಯಕ್ತಿ !

Pinterest LinkedIn Tumblr

ಬಾಗಲಕೋಟೆ: ರಾಜ್ಯದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ಮಾಡಿಕೊಟ್ಟಿದ್ದೇ ತಡ, ಎಲ್ಲೆಡೆ ಮದ್ಯ ಪ್ರಿಯರು ಮದ್ಯದಂಗಡಿಗಳಿಗೆ ಮುಗಿ ಬಿದ್ದಿದ್ದಾರೆ. ರಾಜ್ಯದ ಕೆಲವು ಕಡೆಗಳಲ್ಲಿ ನಿನ್ನೆ ರಾತ್ರಿಯಿಂದಲೇ ಜನ ಮದ್ಯ ಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಅದರಂತೆ ಬಾಗಲಕೋಟೆ ಜಿಲ್ಲೆಯಲ್ಲೂ ಮದ್ಯದಂಗಡಿಗಳು ಒಂದೊಂದಾಗಿ ಓಪನ್ ಆಗುತ್ತಿದ್ದು, ಮದ್ಯ ಪ್ರಿಯನೋರ್ವ ತನಗೆ ಮದ್ಯ ಸಿಕ್ಕ ಖುಷಿಯಲ್ಲಿ ದೇವರ ಗುಡಿ ಮುಂದೆ ಬಾಟಲ್ ಇಟ್ಟು ಧ್ಯಾನ ಮಾಡಿದ ಘಟನೆ ನಡೆದಿದೆ.

ಇಲ್ಲಿನ ಕುಳಗೇರಿ ಕ್ರಾಸ್‌ನಲ್ಲಿ ಮದ್ಯಪ್ರಿಯನೋರ್ವ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದ್ದಾನೆ. ಇದೇ ಖುಷಿಯಲ್ಲಿ ನೇರವಾಗಿ ಹನುಮಂತನ ದೇವಸ್ಥಾನಕ್ಕೆ ತೆರಳಿದ ಈತ, ತನಗೆ ಸಿಕ್ಕ ಬಾಟಲ್‌ನ್ನು ದೇವರ ಮುಂದಿರಿಸಿ ಎರಡು ನಿಮಿಷ ಧ್ಯಾನ ಮಾಡಿದ್ದಾನೆ.

ಬಹಳ ದಿನಗಳ ಬಳಿಕ ಮದ್ಯ ಸಿಕ್ಕಿದ್ದು, ಇದೇ ಖುಷಿಯಲ್ಲಿ ದೇವರಿಗೆ ನಮಸ್ಕರಿಸಿ ಮದ್ಯ ಸೇವಿಸುವುದಾಗಿ ಈತ ಹೇಳಿದ್ದು, ಈತನನ್ನೇ ಹಿಂಬಾಲಿಸಿರುವ ಇನ್ನೂ ಕೆಲವು ವ್ಯಕ್ತಿಗಳು ದೇವರ ಮುಂದೆ ಮದ್ಯ ಇಟ್ಟು ಧ್ಯಾನ ಮಾಡಿ ಮದ್ಯವನ್ನು ಮನೆಗೆ ಕೊಂಡೊಯ್ಯುತ್ತಿದ್ದಾರೆ.

Comments are closed.