ಬೆಂಗಳೂರು(ಮೇ 01): ರಾಜ್ಯದಲ್ಲಿ ನಿನ್ನೆ ಸಂಜೆಯಿಂದ ಒಟ್ಟು 24 ಹೊಸ ಕೊರೋನಾ ಸೋಂಕು ಪ್ರಕರಣ ಬೆಳಕಿಗೆ ಬಂದಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 589ಕ್ಕೆ ಏರಿದೆ. ಮಂಡ್ಯ ಮತ್ತು ದಾವಣಗೆರೆಯಲ್ಲೇ ಇವತ್ತು ಹೆಚ್ಚು ಹೊಸ ಕೇಸ್ಗಳು ಬೆಳಕಿಗೆ ಬಂದಿರುವುದು. ಅದೃಷ್ಟಕ್ಕೆ ಇವತ್ತು ಯಾವುದೇ ಸಾವು ಆಗಿಲ್ಲ. ಸಾವಿನ ಸಂಖ್ಯೆ 22ರಲ್ಲೇ ಮುಂದುವರಿದಿದೆ. ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ ಹೆಲ್ತ್ ಬುಲೆಟಿನ್ನಲ್ಲಿ ಈ ಮಾಹಿತಿ ಇದೆ.
ಈ 24 ಗಂಟೆಯಲ್ಲಿ ಬೆಳಕಿಗೆ ಬಂದ 24 ಪ್ರಕರಣಗಳಲ್ಲಿ ಮಂಡ್ಯ 8, ದಾವಣಗೆರೆ 6, ಬೆಳಗಾವಿ 3, ದಕ್ಷಿಣ ಕನ್ನಡ 2, ವಿಜಯಪುರ 1, ಚಿಕ್ಕಬಳ್ಳಾಪುರ 1, ಕಲ್ಬುರ್ಗಿ 2 ಮತ್ತು ಹುಬ್ಬಳ್ಳಿ-ಧಾರವಾಡ 1 ಪ್ರಕರಣಗಳಿವೆ.
ಮಂಡ್ಯದಲ್ಲಿ ಇಷ್ಟೊಂದು ಪ್ರಕರಣಗಳ ಏರಿಕೆಯಾಗಲು ಮುಂಬೈನಿಂದ ಬಂದ ವ್ಯಕ್ತಿಗಳೇ ಕಾರಣವಾಗಿದ್ದಾರೆ. ಪಿ-566, ಪಿ-567 ಮತ್ತು ಪಿ-568 ಅವರು ಮುಂಬೈನಿಂದ ಬಂದಿದ್ದು, ಇವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಇವರ ಸಂಪರ್ಕಕ್ಕೆ ಬಂದ ಕೆಆರ್ ಪೇಟೆಯ ಒಬ್ಬ ಮಹಿಳೆಗೂ ಸೋಂಕು ಇರುವುದು ಖಚಿತವಾಗಿದೆ. ಇನ್ನು, ಮಳವಳ್ಳಿಯಲ್ಲಿ ಪಿ-179 ರೋಗಿಯ ಸಂಪರ್ಕಕದಿಂದಾಗಿ ನಾಲ್ವರಿಗೆ ಸೋಂಕು ಇರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ. ಇವರೆಲ್ಲರನ್ನೂ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ನಲ್ಲಿಡಲಾಗಿದೆ. ಮಂಡ್ಯದ ಈ ಎಂಟು ಸೋಂಕಿತರು 12-30 ವಯೋಮಾನದವರೇ ಆಗಿದ್ಧಾರೆ. ದಾವಣೆಗೆರೆಯಲ್ಲಿ ಪಿ-556 ರೋಗಿಯಿಂದ ಐವರಿಗೆ ಸೋಂಕು ತಗುಲಿದೆ.
ಇಲ್ಲಿಯವರೆಗೆ 589 ಪಾಸಿಟಿವ್ ಕೇಸ್ಗಳು ದಾಖಲಾಗಿವೆ. ಅವರಲ್ಲಿ 22 ಮಂದಿ ಸಾವನ್ನಪ್ಪಿದ್ದಾರೆ. 251 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನುಳಿದಿರುವ 315 ಆ್ಯಕ್ಟಿವ್ ಕೇಸ್ಗಳಲ್ಲಿ 9 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 306 ರೋಗಿಗಳ ಆರೋಗ್ಯ ಸ್ಥಿತಿ ನಿಯಂತ್ರಣದಲ್ಲಿದೆ.
389 ಪ್ರಕರಣಗಳ ಜಿಲ್ಲಾವಾರು ಪಟ್ಟಿ:ಬೆಂಗಳೂರು ನಗರ: 141
ಮೈಸೂರು: 88
ಬೆಳಗಾವಿ: 70
ಕಲಬುರ್ಗಿ: 55
ವಿಜಯಪುರ: 44
ಬಾಗಲಕೋಟೆ: 29
ಮಂಡ್ಯ: 26
ಚಿಕ್ಕಬಳ್ಳಾಪುರ: 19
ದಕ್ಷಿಣ ಕನ್ನಡ: 18
ಬೀದರ್: 14
ಬಳ್ಳಾರಿ: 13
ಉತ್ತರ ಕನ್ನಡ: 11
ಧಾರವಾಡ: 10
ದಾವಣಗೆರೆ: 10
ಬೆಂಗಳೂರು ಗ್ರಾಮಾಂತರ: 6
ಗದಗ: 5
ತುಮಕೂರು: 5
ಉಡುಪಿ: 3
ಚಿತ್ರದುರ್ಗ: 1
ಕೊಡಗು: 1
ಇತರೆ: 20
ಪಾದರಾಯನಪುರ, ಹೊಂಗಸಂದ್ರದಲ್ಲಿ ನೆಗಟಿವ್:
ಬೆಂಗಳೂರಿಗರಿಗೆ ತುಸು ನಿರಾಳತೆ ತರುವ ವಿಷಯವೆಂದರೆ ಕೊರೋನಾ ಹಾಟ್ಸ್ಪಾಟ್ ಎನಿಸಿರುವ ಪಾದರಾಯನಪುರ ಮತ್ತು ಹೊಂಗಸಂದ್ರದ ಸೋಂಕು ಶಂಕಿತರ ಪರೀಕ್ಷಾ ವರದಿಗಳೆಲ್ಲವೂ ನೆಗಟಿವ್ ಬಂದಿದೆ. ಪಾದರಾಯನಪುರದ 26 ಮಂದಿ ಹಾಗೂ ಹೊಂಗಸಂದ್ರದ 35 ಮಂದಿಯ ಸ್ವಾಬ್ ಟೆಸ್ಟ್ ನೆಗಟಿವ್ ರಿಸಲ್ಟ್ ಬಂದಿದೆ. ಬಿಬಿಎಂಪಿಯ ಆರೋಗ್ಯಾಧಿಕಾರಿ ವಿಜಯೇಂದ್ರ ಈ ಮಾಹಿತಿ ನೀಡಿದ್ದಾರೆ.
Comments are closed.