ಕರ್ನಾಟಕ

“ತೆಲುಗಿನಿಂದ ಕನ್ನಡ ಕಲಿಯಿರಿ” ಪುಸ್ತಕ ಶ್ರೀರಾಮುಲುಗೆ ಕಳುಹಿಸಿದ ಕವಿತಾ ರೆಡ್ಡಿ

Pinterest LinkedIn Tumblr


ರಾಯಚೂರು: ನಗರದ ಪೊಲೀಸ್ ಮೈದಾನದಲ್ಲಿ ಗಣರಾಜ್ಯೋತ್ಸವ ವೇಳೆ ಧ್ವಜಾರೋಹಣ ಬಳಿಕ ಮಾತನಾಡಿದ ಭಾಷಣ ವೇಳೆ ಕನ್ನಡ ತಪ್ಪುತಪ್ಪಾಗಿ ಉಚ್ಛರಿಸಿದ್ದ ಆರೋಗ್ಯ ಸಚಿವ ಶ್ರೀರಾಮುಲುಗೆ ಕಾಗಜ್ ಇಂಡಿಯಾ ಸಂಸ್ಥಾಪಕಿ, ಪರ್ವತಾರೋಹಿ ಕವಿತಾ ರೆಡ್ಡಿ “ತೆಲುಗಿನಿಂದ ಕನ್ನಡ ಕಲಿಯಿರಿ” ಪುಸ್ತಕವನ್ನು ಕಳುಹಿಸುವ ಮೂಲಕ ಅಣುಕಿಸಿದ್ದಾರೆ.

ಗೌರವಾನ್ವಿತ ರಾಮುಲು ಅಣ್ಣನವರೇ ಕನ್ನಡ ಕೊಲ್ಲಬೇಡಿ. ನಿಮಗಾಗಿ ತೆಲುಗಿನಿಂದ ಕನ್ನಡ ಕಲಿಯಿರಿ ಪುಸ್ತಕ ಕಳುಹಿಸುವೆ. ಮುಂದಿನ ಆಗಸ್ಟ್ 15 ರೊಳಗಾಗಿ ಕನ್ನಡ ಕಲಿಯಿರಿ. ಮತ್ತೊಮ್ಮೆ ಕನ್ನಡ ಕೊಲ್ಲದಿರಿ. ಕುಮಾರಸ್ವಾಮಿಯವರನ್ನು ಪಾಕಿಸ್ತಾನಕ್ಕೆ ಹೋಗು ಎಂದು ಹೇಳುವ ಮುಂಚೆ ಕನ್ನಡ ಕಲಿಯಿರಿ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ಮೂಲಕ ಶ್ರೀರಾಮುಲು ಕನ್ನಡ ಉಚ್ಛಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗಿದೆ. 75 ರೂಪಾಯಿ ಬೆಲೆಯ ಪುಸ್ತಕವನ್ನು ರಾಮುಲು ಬಳ್ಳಾರಿ ನಿವಾಸದ ವಿಳಾಸಕ್ಕೆ ಕವಿತಾ ರೆಡ್ಡಿ ಆರ್ಡರ್ ಮಾಡಿದ್ದಾರೆ.

Comments are closed.