ಕರ್ನಾಟಕ

ಹೆಂಡತಿಗೆ ಥಳಿಸಿದ್ದಕ್ಕಾಗಿ ಗಂಡನ ಮನೆಯವರನ್ನೆಲ್ಲ ಹಗ್ಗದಿಂದ ಕಟ್ಟಿಹಾಕಿ ಥಳಿಸಿದ ಗ್ರಾಮಸ್ಥರು

Pinterest LinkedIn Tumblr

ವಿಜಯಪುರ: ತವರು ಮನೆಯಲ್ಲಿದ್ದ ಪತ್ನಿಯನ್ನು ಕರೆದುಕೊಂಡು ಹೋಗಲು ಬಂದಿದ್ದ ಗಂಡನ ಮನೆಯವರು ಆಕೆಯನ್ನು ಥಳಿಸಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು 9 ಮಂದಿಯನ್ನು ಹಗ್ಗದಿಂದ ಕಟ್ಟಿಹಾಕಿ ಥಳಿಸಿರುವ ಘಟನೆ ನಡೆದಿದೆ.

ಮುದ್ದೇಬಿಹಾಳ ತಾಲೂಕಿನ ಆಲಕೊಪ್ಪ ಗ್ರಾಮದಲ್ಲಿನ ಈ ಘಟನೆ ನಡೆದಿದೆ. ಗಂಡನ ಜೊತೆ ಜಗಳ ಮಾಡಿಕೊಂಡಿದ್ದ ಪತ್ನಿ ಕಮಲವ್ವ ವಡ್ಡರ ತಾಯಿ ಮನೆಗೆ ಬಂದಿದ್ದರು. ಆಕೆಯನ್ನು ಕರೆಯಲು ಗಂಡನ ಮನೆಯಿಂದ ಮೂವರು ಮಹಿಳೆ ಮತ್ತು 6 ಮಂದಿ ಪುರುಷರು ಬಂದಿದ್ದರು.

ಈ ವೇಳೆ ಗಂಡನ ಮನೆಗೆ ಬರುವುದಿಲ್ಲ ಎಂದು ಕಮಲವ್ವ ಹೇಳಿದ್ದರಿಂದ ಆಕ್ರೋಶಗೊಂಡ ಗಂಡನ ಮನೆಯವರು ಆಕೆಯನ್ನು ಹಗ್ಗದಿಂದ ಕಟ್ಟಿ ಹಾಕಿ ಥಳಿಸಿದ್ದಾರೆ. ಇದನ್ನು ಕಂಡ ಗ್ರಾಮಸ್ಥರು 9 ಮಂದಿಯನ್ನು ಕಟ್ಟಿಹಾಕಿ ಥಳಿಸಿದ್ದಾರೆ.

ಸುದ್ದಿ ತಿಳಿದ ಕೂಡಲೇ ಮುದ್ದೇಬಿಹಾಳ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

Comments are closed.