ಆನೇಕಲ್: ಕರ್ನಾಟಕ ತಮಿಳುನಾಡು ಗಡಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಕಾಡಂಚಿನ ರೈತರು ಪ್ರತಿವರ್ಷ ತಾವು ಬೆಳೆದ ಬೆಳೆಗಳನ್ನು ಆನೆಗಳಿಂದ ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾನೆ.
ಕರ್ನಾಟಕದಲ್ಲಿ ರೈಲ್ವೆ ಕಂಬಿಗಳನ್ನು ಬಳಸಿ ಆನೆಗಳು ಗ್ರಾಮಗಳತ್ತ ಬರದಂತೆ ತಡೆದಿದ್ದು ಅದೇ ಮಾದರಿಯನ್ನು ತಮಿಳುನಾಡಿನಲ್ಲಿ ಅಳವಡಿಸುವಂತೆ ಅಲ್ಲಿನ ರೈತರು ಅಲ್ಲಿನ ಸರ್ಕಾರವನ್ನು ಅಗ್ರಹಿದ್ದಾರೆ. ಹಿಂಡು ಹಿಂಡಾಗಿ ಬಾಳೆ ತೋಟಕ್ಕೆ ಲಗ್ಗೆ ಇಡುತ್ತಿರೋ ಆನೆಗಳನ್ನು ಓಡಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿಗೆ ಹೊಂದಿಕೊಂಡಿರೋ ತಮಿಳುನಾಡಿನ ಶಾಮಲಪಲ್ಲ ಗ್ರಾಮದಲ್ಲಿ, ಇಂದು ಬೆಳಿಗ್ಗೆ ಸುಮಾರು 40ಕ್ಕೂ ಹೆಚ್ಚು ಆನೆಗಳಿರುವ ಕಾಡನೆ ಗುಂಪು ಆಹಾರ ಅರಸಿ ಕಾಡಿನಿಂದ ಈ ಗ್ರಾಮಕ್ಕೆ ಲಗ್ಗೆ ಇಟ್ಟಿವೆ. ಗ್ರಾಮಸ್ಥರು ವರ್ಷವಿಡಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಕ್ಷಣಮಾತ್ರದಲ್ಲಿ ತುಳಿದು ತಿಂದು ಹಾಳು ಮಾಡಿವೆ. ಆನೆಗಳಿಂದ ಈ ಭಾಗದಲ್ಲಿ ಬಾಳೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಕಾಡಾನೆಗಳ ಕಾಲಿಗೆ ಸಿಕ್ಕ ಬಾಳೆ ಗಿಡಗಳು ಮುರಿದು ಹೋಗಿದ್ದು ಅಪಾರ ಪ್ರಮಾಣದ ಬಾಳೆ ಬೆಳೆ ನಾಶವಾಗಿದೆ.
ಕರ್ನಾಟಕದ ಬನ್ನೇರುಘಟ್ಟ ಭಾಗದಲ್ಲಿ ಆನೆಗಳ ಹಾವಳಿ ತಡೆಯಲು ಇಲ್ಲಿನ ಅರಣ್ಯ ಇಲಾಖೆ ಹಳೆಯ ರೈಲ್ವೆ ಕಂಬಿಗಳನ್ನು ಬಳಸಿ ಬೇಲಿ ನಿರ್ಮಿಸಿದ್ದು, ಇದರಿಂದ ಅಲ್ಲಿನ ಆನೆಗಳು ಇತ್ತ ನುಗ್ಗಿದ್ದು ಇದನ್ನು ತಡೆಯಲು ಕರ್ನಾಟಕದಂತೆ ಇಲ್ಲಿಯು ತಡೆ ಬೇಲಿ ನಿರ್ಮಿಸುವಂತೆ ಅಲ್ಲಿನ ಅರಣ್ಯ ಇಲಾಖೆಯನ್ನು ರೈತರು ಒತ್ತಾಯ ಮಾಡಿದ್ದಾರೆ.
Comments are closed.