ಕರ್ನಾಟಕ

ಕಾಮಕ್ಕೆ ನಿರಾಕರಿಸಿದ ಸೊಸೆಯನ್ನು ಚುಚ್ಚಿ ಕೊಂದ ಮಾವ

Pinterest LinkedIn Tumblr


ಮಂಡ್ಯ: ಕಾಮದಾಸೆಯಿಂದ ಮಾವ ಸೊಸೆಯನ್ನೇ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಾಗಿಮುದ್ದನಹಳ್ಳಿಯ ನಾಗರಾಜು ಎಂಬಾತ ತನ್ನ ಕಾಮದಾಹಕ್ಕೆ ಸೊಸೆ ವೀಣಾ ಎಂಬಾಕೆಯನ್ನು ಪೀಡಿಸುತ್ತಿದ್ದ. ಇದಕ್ಕೆ ನಿರಾಕರಿಸಿದ ವೀಣಾಳನ್ನು ಮಾವ ನಾಗರಾಜು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ.

ಕಳೆದ ಹಲವು ದಿನಗಳಿಂದ ನಾಗರಾಜು ವೀಣಾಳ ಗಂಡ ಅನಿಲ್ ಇಲ್ಲದ ವೇಳೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ವೀಣಾ ಮನನೊಂದ್ದಿದಳು. ಶನಿವಾರ ರಾತ್ರಿ ಯಾರು ಇಲ್ಲದ ವೇಳೆ ನಾಗರಾಜು ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾನೆ. ಈ ವೇಳೆ ವಿರೋಧ ಮಾಡಿದ ಸೊಸೆ ವೀಣಾಳನ್ನು ನಾಗರಾಜು ಕೊಲೆಗೈದಿದ್ದಾನೆ.

ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.