ಕರ್ನಾಟಕ

ಎಂಗೇಜ್‍ಮೆಂಟ್ ಆಗಿಲ್ಲ, ಅವರು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ: ನಿವೇದಿತಾ ಹೆತ್ತವರು

Pinterest LinkedIn Tumblr


ಮೈಸೂರು: ಯುವ ದಸರಾ ವೇದಿಕೆಯಲ್ಲಿ ಚಂದನ್‍ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಎಂಗೇಜ್‍ಮೆಂಟ್ ಆಗಿಲ್ಲ, ಅವರು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಎಂದು ನಿವೇದಿತಾ ಗೌಡ ಪೋಷಕರು ತಿಳಿಸಿದ್ದಾರೆ.

ಯುವ ದಸರಾ ವೇದಿಕೆಯಲ್ಲೇ ನಿವೇದಿತಾ ಗೌಡಾಗೆ ಪ್ರಪೋಸ್ ಮಾಡಿ ರಿಂಗ್ ತೊಡಿಸಿದ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇದು ನಮಗೆ ಸರ್ಪ್ರೈಸ್ ತಂದಿದೆ. ನಾವು ಕಾರ್ಯಕ್ರಮ ನೋಡಲೆಂದು ಹೋಗಿದ್ದೇವೆ ಅಷ್ಟೇ. ಅಲ್ಲಿ ಈ ರೀತಿ ಆಗಿರೋದು ಆಶ್ಚರ್ಯದ ಜೊತೆಗೆ ಖುಷಿಯನ್ನು ಕೂಡ ತಂದಿದೆ ಎಂದಿದ್ದಾರೆ.

ಇದನ್ನು ನಿಶ್ಚಿತಾರ್ಥ ಎಂದು ಹೇಳಲಾಗುವುದಿಲ್ಲ. ಇದೊಂದು ಸರ್ಪ್ರೈಸ್ ಅಷ್ಟೇ. ನಮಗೂ ಗೊತ್ತಿರಲಿಲ್ಲ. ಇದ್ದಕ್ಕಿಂದತೆಯೇ ಇದು ನಡೆದು ಹೋಗಿದೆ. ಹೀಗಾಗಿ ನಮಗೂ ಅಲ್ಲೇ ಗೊತ್ತಾಗಿರೋದು. ಯುವದಸರಾದಲ್ಲಿ ನಡೆದಿರುವುದನ್ನು ನೋಡಿ ನನಗೂ ತುಂಬಾ ಸಂತೋಷ ಆಯಿತು. ಅಲ್ಲಿ ನೆರೆದಿದ್ದ ಎಲ್ಲ ಜನರೂ ಇದನ್ನು ಇಷ್ಟಪಟ್ಟರು. ನಮ್ಮಲ್ಲಿಯೂ ಬಂದು ಕೆಲವರು ಖುಷಿಯಾಯಿತು ಎಂದು ನಿವೇದಿತಾ ತಾಯಿ ಹೇಳಿದರು.

ಚಂದನ್ ಅವರನ್ನು ಲವ್ ಮಾಡುತ್ತಿದ್ದೇನೆ ಎಂದು ನಿವೇದಿತಾ ಯಾವತ್ತೂ ಹೇಳಿರಲಿಲ್ಲ. ಆದರೆ ಇದಕ್ಕೂ ಮೊದಲು ಚಂದನ್ ಹೆತ್ತವರು ,ನಾವು ಒಂದು ಬಾರಿ ಮಾತನಾಡಿದ್ದೆವು. ಅದು ಬಿಟ್ಟರೆ ಪೂರ್ತಿಯಾಗಿ ಈ ಬಗ್ಗೆ ಚರ್ಚೆ ನಡೆಸಿರಲಿಲ್ಲ ಎಂದರು.

ಇದೇ ವೇಳೆ ನಿವೇದಿತಾ ತಂದೆ ಮಾತನಾಡಿ, ಯುವಕರಲ್ವ ಹೀಗಾಗಿ ಅವರು ಯುವದಸರಾದಲ್ಲಿ ಪ್ರಪೋಸ್ ಮಾಡಿದ್ದಾರೆ. ಇದರಿಂದ ನಮಗೂ ತುಂಬಾ ಖುಷಿಯಾಯಿತು. ಆದರೆ ಅದರ ಬಗ್ಗೆ ನಮಗೂ ಗೊತ್ತಿರಲಿಲ್ಲ ಎಂದು ತಿಳಿಸಿದರು.

ಬಿಗ್ ಬಾಸ್ ಬಳಿಕ ಅವರ ಕುಟುಂಬದೊಂದಿಗೆ ಒಳ್ಳೆಯ ಒಡನಾಟ ಇದೆ. ಹೀಗಾಗಿ ಚಂದನ್ ಬಗ್ಗೆ ತಿಳಿದುಕೊಂಡಿದ್ದೇವೆ. ಲವ್ ಮಾಡುತ್ತಿದ್ದಾರೆ ಎಂದು ಗೊತ್ತಿರಲಿಲ್ಲ. ಆದರೆ ಒಂದು ಬಾರಿ ಜಸ್ಟ್ ಮಾತಾಡಿದ್ದೆವು. ಮದುವೆ ಕಾರ್ಯಕ್ರಮದ ಬಗ್ಗೆ ಇನ್ನಷ್ಟೇ ಮಾತುಕತೆ ನಡೆಸಬೇಕು ಎಂದು ಹೇಳಿದರು.

Comments are closed.