ಕರ್ನಾಟಕ

ಬೆಂಗಳೂರು ಉಸ್ತುವಾರಿ ಕೈತಪ್ಪಿದ್ದಕ್ಕೆ ಆರ್.ಅಶೋಕ್ ಅಸಮಾಧಾನ….!

Pinterest LinkedIn Tumblr


ಬಿಎಸ್​ವೈ ಸಂಪುಟ ವಿಸ್ತರಣೆಯಾಗಿ ತಿಂಗಳು ಕಳೆದಿದ್ದರೂ ಸಚಿವರುಗಳಲ್ಲಿರೋ ಅಸಮಧಾನ ಮಾತ್ರ ಪೂರ್ತಿ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಇಂದೂ ಕೂಡ ಸಚಿವರು ಒಳಗೊಳಗೆ ಅಸಮಾಧಾನ ಪಡುತ್ತಿದ್ದಾರೆ. ಇದಕ್ಕೆ ಸಚಿವ ಆರ್.ಅಶೋಕ್ ಕೂಡ ಹೊರತಲ್ಲ. ಹೌದು ಬೆಂಗಳೂರು ಉಸ್ತುವಾರಿ ಕೈ ತಪ್ಪುತ್ತಿರೋ ಅಸಮಧಾನವನ್ನು ಆರ್.ಅಶೋಕ್​ ಹಾಡಿನ ಮೂಲಕ ಹೊರಹಾಕಿದ್ದಾರೆ.

ಹೌದು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದ ಜೊತೆ ಮಾತನಾಡುತ್ತಿದ್ದ ವೇಳೆ ಆರ್.ಅಶೋಕ್​ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ. ಶಾಸಕ ನಿರಂಜನ ಜೊತೆ ತಮಾಷೆಯಾಗಿ ಮಾತನಾಡುತ್ತಿದ್ದ ಆರ್.ಅಶೋಕ್​, ಮಾಧ್ಯಮಗಳ ಕ್ಯಾಮರಾ ಎದುರೇ ದೊಡ್ಡವರೆಲ್ಲ ಜಾಣರಲ್ಲ, ಚಿಕ್ಕವರೆಲ್ಲ ಕೋಣರಲ್ಲ ಎಂದು ಅತೃಪ್ತಿಯನ್ನು ಹಾಡಿನ ಮೂಲಕ ತೋಡಿಕೊಂಡಿದ್ದಾರೆ.

ಬೆಂಗಳೂರು ಉಸ್ತುವಾರಿ ಕೈತಪ್ಪೋ ಆತಂಕದಲ್ಲಿರೋ ಸಚಿವ ಆರ್.ಅಶೋಕ್​ ತಮ್ಮ ಅಸಮಧಾನವನ್ನೆಲ್ಲ ದೊಡ್ಡವರೆಲ್ಲ ಜಾಣರಲ್ಲ…ಚಿಕ್ಕವರೆಲ್ಲ ಕೋಣರಲ್ಲ ಎಂಬ ಹಾಡಿನ ಮೂಲಕ ಹೊರಹಾಕಿದ್ದಾರೆ.

ಇದೀಗ ದೃಶ್ಯ ಎಲ್ಲೆಡೆ ವೈರಲ್​ ಆಗಿದ್ದು, ಬಿಎಸ್​ವೈ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಇರೋದು ಹಾಗೂ ಬೆಂಗಳೂರು ಉಸ್ತುವಾರಿ ಕೈ ತಪ್ಪುತ್ತಿರೋದಿಕ್ಕೆ ಆರ್.ಅಶೋಕ್​ ಈ ರೀತಿ ತಮ್ಮ ನೋವು ತೋಡಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿದೆ.

Comments are closed.