ಕರ್ನಾಟಕ

ಕೊನೆಗೂ ಅನರ್ಹ ಶಾಸಕರ ಕಡೆ ಗಮನಹರಿಸಿದ ಯಡಿಯೂರಪ್ಪ!

Pinterest LinkedIn Tumblr


ಬೆಂಗಳೂರು: ಅನರ್ಹ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಮುಂದಾಗಿದ್ದು ಅವರೊಟ್ಟಿಗೆ ಮಾತುಕತೆ ನಡೆಸಿ ಭರವಸೆ ನೀಡಿದ್ದಾರೆ.

ನಿನ್ನೆ ನಗರದಲ್ಲಿ ಒಟ್ಟಾಗಿ ಸಭೆ ಸೇರಿ ಅನರ್ಹ ಶಾಸಕರು ಚರ್ಚೆ ನಡೆಸಿದ್ದರು ಹೀಗಾಗಿ ಇಂದು ಬೆಳಗ್ಗೆ ಅನರ್ಹ ಶಾಸಕ ಡಾ.ಕೆ. ಸುಧಾಕರ್, ಎಂ.ಟಿ. ನಾಗರಾಜ್ ಅವರಿಗೆ ಕರೆ ಮಾಡಿ ಸಿಎಂ ಮಾತುಕತೆ ನಡೆಸಿದ್ದು, ತಾಳ್ಮೆ ಕಳೆದುಕೊಳ್ಳದಂತೆ ಮನವಿ ಮಾಡಿ ಕೊಂಡಿದ್ದಾರೆ.

ಇನ್ನು ನಿಮ್ಮ ಸಹಕಾರವನ್ನು ಬಿಜೆಪಿ ಮರೆತಿಲ್ಲ, ಹೈಕಮಾಂಡ್ ನಿಮ್ಮ ಕೈ ಬಿಡುವುದಿಲ್ಲ, ಪಕ್ಷದಲ್ಲಿ ನಿಮಗೆ ಒಳ್ಳೆಯ ಸ್ಥಾನಗಳು ಸಿಕ್ಕೆ ಸಿಗುತ್ತೆ, ಸುಪ್ರೀಂ ಕೋರ್ಟ್ ವಿಚಾರಣೆಗೆ ಅರ್ಜಿ ಕೈಗೆತ್ತಿಕೊಂಡರತೇ, ನಿಮ್ಮ ಪರವೇ ತೀರ್ಪು ಬರೋ ವಿಶ್ವಾಸ ಇದೆ
ಅಲ್ಲಿಯವರೆಗೂ ತಾಳ್ಮೆಯಿಂದಿರಿ ಎಂದು ಬಿಎಸ್​ ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ಈ ಹಿಂದೆ ಮೈತ್ರಿ ಸರ್ಕಾರ ಹುರುಳಿಸುವಲ್ಲಿ 17 ಜನ ಅನರ್ಹ ಶಾಸಕರು ಪ್ರಮುಖ ಪಾತ್ರವಹಿಸಿದ್ದರು. ಇತ್ತೀಚಿಗೆ ಬಿಜೆಪಿಯೂ ಅನರ್ಹ ಶಾಸಕರನ್ನು ಕಡೆಗಣಿಸಿದೆ ಎಂಬ ಸಂಶಯದ ಮೇರೆಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಅವರುಗಳಿಗೆ ಕಾಲ್ ಮಾಡಿ ಈ ರೀತಿಯಾಗಿ ಮಾತುಕತೆ ನಡೆಸಿ ಸರ್ಕಾರ ನಿಮ್ಮನ್ನು ಕಡೆಗಣಿಸಿಲ್ಲ ಎಂದು ಅವರು ತಿಳಿಸಿದ್ದಾರೆ.​

Comments are closed.