ಕರ್ನಾಟಕ

ಸಿದ್ದು ಕೈವಾಡದಿಂದ ಡಿಕೆಶಿ ಬಂಧನ: ನಳಿನ್ ಕುಮಾರ್ ಕಟೀಲ್

Pinterest LinkedIn Tumblr


ಬಾಗಲಕೋಟೆ: ಮಾಜಿ ಸಚಿವ ಡಿ ಕೆ ಶಿಚಕುಮಾರ್‌ ಅವರ ಬಂಧನದ ರಾಜಕೀಯ ಪ್ರೇರಿತವಾಗಿದ್ದು, ಇದರ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಕಾಂಗ್ರೆಸ್‌ ಜೆಡಿಎಸ್‌ ನಾಯಕರು ಆರೋಪ ಮಾಡುತ್ತಿದ್ದರು. ಆದರೆ ಈಗ ಮಹತ್ತರ ಬೆಳವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಹೊಸತೊಂದು ಹೇಳಿಕೆ ನೀಡಿದ್ದು, ಡಿಕೆಶಿ ಬಂಧನದ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈವಾಡವಿದೆ ಎಂದಿದ್ದಾರೆ.

ಬಾಗಲಕೋಟೆ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿಯವರು ದ್ವೇಷದ ರಾಜಕಾರನ ಮಾಡಿಲ್ಲ. ಹಾಗೆ ಮಾಡುವುದಾದರೆ ಚುಣಾವಣೆಗೆ ಮೊದಲೇ ಡಿಕೆಶಿ ಬಂಧನ ಮಾಡಿಸಬಹುದಿತ್ತು. 2017ರಲ್ಲಿ ದಾಳಿ ಆಗಿದೆ. ಆಗ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರು. ಹಾಗಾಗಿ ನನಗೆ ಅವರೇ ದ್ವೇಷದ ರಾಜಕಾರಣ ಮಾಡಿದ್ದಾರೆ ಎಂದು ಅನಿಸುತ್ತಿದೆ ಎಂದರು.

Comments are closed.