ಬೆಂಗಳೂರು: 17 ಜನ ಅನರ್ಹ ಶಾಸಕರಿಗೆ ಈಗ ಅಭದ್ರತೆಯ ಭಯ ಕಾಡುತ್ತಿರುವುದನ್ನು ತಳ್ಳಿ ಹಾಕುವಂತಿಲ್ಲ, ಸುಪ್ರೀಂಕೋರ್ಟ್ ತೀರ್ಪು ನಮ್ಮ ಪರವಾಗಿ ಬರುತ್ತದೋ(?) ತೀರ್ಪು ನಮ್ಮವಿರುದ್ಧವಾಗಿ ಬಂದರೆ ಮುಂದೆ ಹೇಗೆ(?) ಎಂಬ ಹಲವು ಪ್ರಶ್ನೆಗಳು ಅವರ ಕಣ್ಮುಂದೆ ಇದೆ.
ಅಕಸ್ಮಾತ್ ಬೈ ಎಲೆಕ್ಷನ್ ನಡೆದರೆ ಬಿಜೆಪಿ ನಮಗೆ ಬಿಜೆಪಿ ಟಿಕೆಟ್ ನೀಡುತ್ತಾ ಹೇಗೆ(?) ನಾವು ಅಲ್ಲಿಗೆ ಹೋದರೆ, ಅಲ್ಲಿರುವವರು ಸುಮ್ಮನಿರ್ತಾರಾ(?) ನಮಗೆ ಸಚಿವ ಸ್ಥಾನ ಸಿಗುತ್ತಾ ಇಲ್ವಾ(?) ಸುಪ್ರೀಂಕೋರ್ಟ್ ವಿಚಾರಣೆ ಮುಂದಕ್ಕೆ ಹೋದರೆ ಏನ್ಮಾಡುವುದು(?) ಕೋರ್ಟ್ ಖರ್ಚು ವೆಚ್ಚಗಳನ್ನ ಅವರೇ ಭರಿಸ್ತಾರಾ(?) ಈ ಎಲ್ಲಾ ಅನುಮಾನಗಳ ಪ್ರಶ್ನೆಗಳು ಅನರ್ಹ ಶಾಸಕರಿಗೆ ಕಾಡುತ್ತಿವೆ.
ಹೀಗಾಗಿಯೇ ನಿನ್ನೆ ಗೋಕಾಕ್ ಕ್ಷೇತ್ರದ ಅನರ್ಹ ಕಾಂಗ್ರೆಸ್ ರಮೇಶ್ ಜಾರಕಿಹೊಳಿ ಅವರ ಜೊತೆ ಅನರ್ಹರು ಸಮಸ್ಯೆ ಹಂಚಿಕೊಂಡಿದ್ದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಇಂದು ರಮೇಶ್ ಜಾರಕಿಹೊಳಿ ಅವರು ತಮ್ಮ ನಿವಾಸಕ್ಕೆ ಬರುವಂತೆ ಸೂಚನೆ ಕೊಟ್ಟಿದ್ದರು.
ಇತ್ತ ಸಿಎಂ ಬಿ.ಎಸ್ ಯಡಿಯೂರಪ್ಪನವರು ಪಿ.ಎ ಸಂತೋಷ್, ಸಿ.ಪಿ ಯೋಗೇಶ್ವರ್ ಅವರು ಬರುವಂತೆ ರಮೇಶ್ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಅನರ್ಹರು ನೇರವಾಗಿ ತಮಗೆ ಇರುವ ಸಂದೇಹಗಳನ್ನು ಬಿಜೆಪಿ ನಾಯಕರೊಟ್ಟಿಗೆ ಹೇಳಿಕೊಳ್ಳುವಂತೆ ಮಾಡಿದ್ದಾರೆ.
ಸದ್ಯ ಸಿ.ಪಿ ಯೋಗೇಶ್ವರ್ ಅವರು ಅನರ್ಹ ಶಾಸಕರಿಗೆ ಸಂಪೂರ್ಣ ಭರವಸೆ ನೀಡಿದ್ದು, ಕೋರ್ಟ್ ಖರ್ಚು-ವೆಚ್ಚ ನೋಡಿಕೊಳ್ಳುವುದಲ್ಲದೇ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ನೀಡುವ ಭರವಸೆಯನ್ನು ಬಿಜೆಪಿ ನಾಯಕರು ನೀಡಿದ್ದಾರೆ.
Comments are closed.