ಕರ್ನಾಟಕ

ರಾಜೀನಾಮೆಗೆ ಕಾರಣ ಹೇಳಿದ ಅನರ್ಹ ಶಾಸಕ ಎಂಟಿಬಿ ನಾಗರಾಜು!

Pinterest LinkedIn Tumblr


ಬೆಂಗಳೂರು: ನಮ್ಮ ಕ್ಷೇತ್ರದ ಕೆಲಸಗಳು ಆಗ್ತಿರಲಿಲ್ಲ, ಹಾಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೊಸಕೋಟೆ ಕ್ಷೇತ್ರದ ಅನರ್ಹ ಕೈ ಶಾಸಕ ಎಂಟಿಬಿ ನಾಗರಾಜು ಅವರು ಶನಿವಾರ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಹಣ, ಅಧಿಕಾರದಿಂದ ಹೋದವನಲ್ಲ, ನನಗೆ ಅದರ ಅವಶ್ಯಕತೆಯೂ ಇಲ್ಲ. ದೇವರು ನಮಗೆ ಸಾಕಷ್ಟು ಕೊಟ್ಟಿದ್ದಾನೆ ಎಂದು ಅವರು ತಮ್ಮ ರಾಜೀನಾಮೆ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ.

ಇನ್ನು ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಹಾಕಿದ್ದೇವೆ ಅಲ್ಲಿ ವಿಚಾರಣೆ ಆಗಬೇಕು, ತೀರ್ಪು ಪ್ರಕಟವಾಗಬೇಕು. ಆ ನಂತರ ಎಲ್ಲಿಗೆ ಹೋಗಬೇಕು, ನಿಲ್ಲಬೇಕಾ(?) ಎಂದು ಯೋಚಿಸ್ತೇನೆ ಅಲ್ಲದೇ ನಾನು ನಿಲ್ಲಬೇಕಾ(?) ಪುತ್ರ ನನ್ನ ನಿಲ್ಲಿಸಬೇಕಾ(?)ನೋಡ್ತೇವೆ ಎಂದು ಅವರು ತಿಳಿಸಿದರು.

ಸದ್ಯ ಈಗ ಅದರ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ, ಮೊದಲು ನ್ಯಾಯಾಲಯದ ತೀರ್ಮಾನ ಬರಲಿ. ಅವರು ಯಾವ ಮೀಟಿಂಗ್ ಬೇಕಾದರೂ ಮಾಡಲಿ ಎಂದು ಎಂಟಿಬಿ ನಾಗರಾಜು ಅವರು ನುಡಿದರು.

ಸ್ಪೀಕರ್​ ರಮೇಶ್​ ಕುಮಾರ್​ ಅವರು 17 ಜನ ಅತೃಪ್ತ ಶಾಸಕರನ್ನು ಅನರ್ಹ ಮಾಡಿದ್ದರು ಅದರಲ್ಲಿ ಇವರು ಸಹ ಒಬ್ಬರಾಗಿದ್ದಾರೆ.

Comments are closed.