ಕರ್ನಾಟಕ

ನಾವು ಹುಟ್ಟಿಸಿದ ಮಕ್ಕಳನ್ನು ನಮ್ಮ ಮಕ್ಕಳು ಎನ್ನುತ್ತಿರುವ ಬಿಜೆಪಿಯವರು ಗಂಡಸ್ರಾ..?

Pinterest LinkedIn Tumblr


ಕೊಪ್ಪಳ: ಕೊಪ್ಪಳದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಬಿಜೆಪಿ ವಿರುದ್ಧ, ಅತೃಪ್ತ ಶಾಸಕರ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಅತೃಪ್ತರೆಲ್ಲಾ ನಡತೆಗೆಟ್ಟವರು ಎಂದು ಹೇಳಿರುವ ಇಬ್ರಾಹಿಂ, ನಾವು ಹುಟ್ಟಿಸಿದ ಮಕ್ಕಳನ್ನು ನಮ್ಮ ಮಕ್ಕಳು ಎನ್ನುತ್ತಿರೋ ಬಿಜೆಪಿಯವರು ಗಂಡಸ್ರಾ..?ಎಂದು ಕಮಲಪಾಳಯದವರನ್ನು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಅಲ್ಲದೇ, ನಡತೆಗೆಟ್ಟ ಹುಡುಗಿಯ ಸ್ಥಿತಿ ಅತೃಪ್ತರಿಗಾಗಿದೆ. ಪತಿವ್ರತೆಯರೆಲ್ಲರೂ ಮುಂಬೈಗೆ ಹಾರಿ ಹೋಗಿದ್ರು. ಬಿಜೆಪಿಯವರು ಮೂರು ದಿವಸ ಇಟ್ಟುಕೊಂಡು ರಸ್ತೆಗೆ ಬಿಟ್ಟಿದ್ದಾರೆ. ಈಗ ಬೀದಿಗೆ ಬಂದು ಅತೃಪ್ತರು ದೇವದಾಸಿಯರಾಗಿದ್ದಾರೆ. ತೀನ್ ದಿನ್‌ ಕಾ ಬಜಾರ್ ಎಂದು ಅತೃಪ್ತ ಶಾಸಕರ ವಿರುದ್ಧ ಕೀಳುಮಟ್ಟದ ಭಾಷೆ ಉಪಯೋಗಿಸಿದ್ದಾರೆ.

ಇನ್ನು ಸಿದ್ದರಾಮಯ್ಯರಿಂದಲೇ ಅತೃಪ್ತ ಶಾಸಕರು ಮುಂಬೈಗೆ ಹಾರಿದ್ದೆಂಬ ಸುದ್ದಿ ಹರಡಿರುವ ಬಗ್ಗೆ ಮಾತನಾಡಿದ ಇಬ್ರಾಹಿಂ, ಅತೃಪ್ತರು ಮುಂಬೈಗೆ ಹೋಗಿದ್ದರಲ್ಲಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ ಎಂದು ಹೇಳಿದ್ದಾರೆ.

Comments are closed.