ಹಾಸನ: ಅನರ್ಹಗೊಂಡ 14 ಅತೃಪ್ತ ಕಾಂಗ್ರೆಸ್ ಶಾಸಕ ತಿಥಿ ಕಾರ್ಯವನ್ನು ಹಾಸನದ ಕೈ ಭವನದಲ್ಲಿ ಕಾರ್ಯಕರ್ತರು ಸೋಮವಾರ ನೇರವೇರಿಸಿದರು.
ನಮ್ಮ ಪಕ್ಷಕ್ಕೆ ದ್ರೋಹ ಎಸಗಿ ಹೋದವರು ನಮ್ಮ ಪಾಲಿಗೆ ಈ ಸತ್ತಿದ್ದಾರೆ ಎಂದು ಕಾಂಗ್ರೆಸ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದು, ತಿಥಿ ಕಾರ್ಯದಲ್ಲಿ ವಡೆ, ಹೂವಿನ ಹಾರ ಪ್ರದರ್ಶಿಸಿ ಅನರ್ಹ ಶಾಸಕರ ತಿಥಿ ಆಚರಣೆ ಮಾಡಲಾಯಿತು.
ಇನ್ನು ಅನರ್ಹಗೊಂಡ ಶಾಸಕರ ಮುಂದೆ ಪಕ್ಷಕ್ಕೆ ಸೇರಿಸಿದಂತೆ ಹೈಕಮಾಂಡ್ಗೆ ಮನವಿ ಮಾಡಿಕೊಂಡ ಕಾರ್ಯಕರ್ತರು, ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಕ್ರಮಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಮೈತ್ರಿ ಸರ್ಕಾರದ ಬೀಳಲು ಕಾಂಗ್ರೆಸ್ನ 14 ಶಾಸಕರು ಹಾಗೂ ಜೆಡಿಎಸ್ 3 ಶಾಸಕರು ಕಾರಣಕರ್ತರಾಗಿದ್ದರು. ಮೊದಲ ಬಾರಿಗೆ ಸ್ಪೀಕರ್ ರಮೇಶ್ ಕುಮಾರ್ ಅವರು ಮೂವರು ಶಾಸಕರನ್ನು ಅನರ್ಹ ಮಾಡಿ ಉಳಿದ 14 ಶಾಸಕರನ್ನು ನಿನ್ನೆ ಅನರ್ಹಗೊಳಿಸುವ ಮೂಲಕ ಅತೃಪ್ತರ ನಡೆಗೆ ಶಾಕ್ ನೀಡಿದರು.
Comments are closed.