ಕರ್ನಾಟಕ

ಎಚ್​ಡಿಕೆಗೆ ಶಾಕ್​ ನೀಡಿದ ಬಿಎಸ್​ವೈ​​! ಜುಲೈತಿಂಗಳ ಎಲ್ಲ ಆದೇಶಕ್ಕೆ ಬ್ರೇಕ್​!!

Pinterest LinkedIn Tumblr


ಮಾಸ್ಟರ್ ಪ್ಲ್ಯಾನ್ ಮೂಲಕವೇ ಮೈತ್ರಿ ಸರ್ಕಾರವನ್ನು ಉರುಳಿಸಿದ ಬಿಜೆಪಿ ಇದೀಗ ಅಧಿಕಾರಕ್ಕೆರಲು ಕ್ಷಣಗಣನೆ ನಡೆದಿದೆ. ಇನ್ನು ಗದ್ದುಗೆ ಏರೋದಿಕ್ಕೆ ಮುನ್ನವೇ ಯಡಿಯೂರಪ್ಪ ತಮ್ಮ ದರ್ಬಾರ ಆರಂಭಿಸಿದ್ದು, ಸರ್ಕಾರ ಪತನವಾದ ದುಃಖದಲ್ಲಿರೋ ಕುಮಾರಸ್ವಾಮಿಯವರಿಗೆ ಮತ್ತೊಂದು ಶಾಕ್ ನೀಡಿದ್ದಾರೆ.

ಹೌದು ಗದ್ದುಗೆ ಏರೋ ಮುನ್ನವೇ ಬಿಎಸ್​ವೈ ತಮ್ಮ ದರ್ಬಾರ ಆರಂಭಿಸಿದ್ದು, ಜುಲೈ ತಿಂಗಳಿನಲ್ಲಿ ಎಲ್ಲಾ ವರ್ಗಾವಣೆಗಳಿಗೂ ಬಿಎಸ್​ವೈ ಬ್ರೇಕ್​ ಹಾಕಿದ್ದಾರೆ. ಜುಲೈತಿಂಗಳಿನಲ್ಲಿ ರಾಜ್ಯದಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಲ್ಲೂ ಎಗ್ಗಿಲ್ಲದೇ ವರ್ಗಾವಣೆಗಳು ನಡೆದಿದ್ದವು.

ಹೀಗಾಗಿ ಈ ಎಲ್ಲ ವರ್ಗಾವಣೆ, ಕಾಮಗಾರಿ ಸಂಬಂಧಿಸಿದ ಆದೇಶ, ಟೆಂಡರ್​ಗಳಿಗೂ ಬಿಎಸ್​ವೈ ನಿಯೋಜಿತ ಸಿಎಂ ಅಧಿಕಾರ ಬಳಸಿ ತಡೆಯಾಜ್ಞೆ ನೀಡಿದ್ದಾರೆ. ಈ ಬಗ್ಗೆ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಸಿಎಂ ಬಿಎಸ್ವೈ ಸೂಚನೆ ನೀಡಿದ್ದಾರೆ.

ಎಚ್​ಡಿಕೆ ನೀಡಿದ ಆದೇಶಗಳನ್ನು ತಡೆಹಿಡಿಯುವಂತೆ ಇಲ್ಲಾ ಇಲಾಖೆಗಳಿಗೆ ಸೂಚಿಸಲು ವಿಜಯ್ ಭಾಸ್ಕರ್​​ ಸುತ್ತೋಲೆ ಹೊರಡಿಸಿದ್ದಾರೆ. ಇದರಿಂದ ಕೊನೆಕ್ಷಣದಲ್ಲಿ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿ ಮೈತ್ರಿ ಸರ್ಕಾರ ನಡೆಸಿದ್ದ ತರಾತುರಿಯಲ್ಲಿ ನಡೆಸಿದ್ದ ಎಲ್ಲ ಕೆಲಸಗಳಿಗೂ ಬ್ರೇಕ್​ ಬಿದ್ದಿದ್ದು, ಮೈತ್ರಿ ಪಾಳಯ ಹಾಗೂ ಮಾಜಿಸಿಎಂ ತೀವ್ರ ಮುಜುಗರಕ್ಕೊಳಗಾಗುವಂತೆ ಮಾಡಿದೆ.

Comments are closed.