ಕರ್ನಾಟಕ

ಪ್ರೇಯತಮೆಗಾಗಿ ಮನೆ ಕಟ್ಟಿಸೋಕೆ ಈತ ಮಾಡಿದ್ದೇನು ಗೊತ್ತಾ..!

Pinterest LinkedIn Tumblr


ಬೆಂಗಳೂರು: ಪ್ರೇಯಸಿಯನ್ನು ರಿಚ್ಚಾಗಿ ನೋಡಿಕೊಳ್ಳಬೇಕೆಂದು ಹಗಲು ರಾತ್ರಿ ದುಡಿದಿದ್ದ, ಆದರೆ ದುಡಿದು ದಕ್ಕಿಸಿಕೊಳ್ಳೊದು ಅಷ್ಟರಲ್ಲೇ ಇದೆ ಎಂದು ಆತ ಕೊನೆಗೆ ಕೈ ಹಾಕಿದ್ದು ಕಳ್ಳತನಕ್ಕೆ.

ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದು. ಆಂಧ್ರದ ಅನಂತಪುರ ಬಿಟ್ಟು ಬಂದಿದ್ದ ಆರೋಪಿ ರಾಜು, ಪಕ್ಕದ ಮನೆಯಲ್ಲಿರುವ ಎರಡು ಮಕ್ಕಳ ತಾಯಿಯನ್ನು ಪಟಾಯಿಸಿದ್ದ. ಅವಳ ಸೌಂದರ್ಯಕ್ಕೆ ಫಿದಾ ಆದವನು ಅವಳು ಕೇಳಿದ್ದನೆಲ್ಲ ಕೊಡಿಸಿದ್ದ. ಆದರೆ ಕೂಡಿಟ್ಟಿದ್ದ ಹಣ ಯಾವಾಗ ಖಾಲಿ ಆಯ್ತೋ. ಆತ ಹಿಡಿದ ಹಾದಿ ಚೈನ್​ ಸ್ನ್ಯಾಚಿಂಗ್ ಮಾಡಲು ಮಂದಾದ ​.

ಉಪ್ಪಾರಪೇಟೆ ಸಮೀಪದ ಸುಖಸಾಗರ್​ ಹೊಟೇಲ್​ನಲ್ಲಿ ಕ್ಲೀನರ್​ ಕಂ ಸಪ್ಲೈಯರ್​ ಆಗಿದ್ದ ರಾಜು, ಆರು ವರ್ಷದ ಹಿಂದೆ ಆಂಧ್ರದ ಅನಂತ​ಪುರದಿಂದ ಬಂದಿದ್ದ. ಒಂದೇ ಕಡೆ ಕೆಲಸ ಮಾಡಿ ನಂಬಿಕಸ್ಥ ಅನಿಸಿಕೊಂಡಿದ್ದವನು ಮನೆ ಪಕ್ಕದಲ್ಲಿರುವ ಆಂಟಿಗೆ ಕಣ್ಣು ಹಾಕಿದ. ಎರಡು ಮಕ್ಕಳ ತಾಯಿ ಎಂದು ಗೊತ್ತಿದ್ದರೂ ಲವ್​ ಶುರು ಹಚ್ಚಿಕೊಂಡವನಿಗೆ ಆಕೆಯಿಂದಲೂ ಗ್ರೀನ್​ ಸಿಗ್ನಲ್​ ಸಿಕ್ಕಿತ್ತು. ಅವಳನ್ನು ಸಂತೋಷಪಡಿಸೋ ಸಲುವಾಗಿ ಮೊದಲು ಸಿಟಿ ಮಾರ್ಕೆಟ್​ಗೆ ಲಗ್ಗೆ ಇಟ್ಟು ಒಬ್ಬೊಂಟಿ ಹೆಂಗಸರ ಕುತ್ತಿಗೆಗೆ ಕೈ ಹಾಕಿ ಸಕ್ಸಸ್ ಆಗಿದ್ದ.

ಯಾವಾಗ ದುಡ್ಡು ಕೈಯಲ್ಲಿ ಓಡಾಡಿತೋ ಕೆ.ಪಿ.ಅಗ್ರಹಾರ ಸೇರಿದಂತೆ ಹಲವೆಡೆ ಸರಗಳ್ಳತನ ಮತ್ತು ಮೊಬೈಲ್​ ಕಳ್ಳತನಕ್ಕೆ ಮುಂದಾಗಿದ್ದ. ಹೀಗೆ ಈತ ಕದ್ದು ಗುಡ್ಡೆ ಹಾಕಿದ್ದು ಬರೋಬ್ಬರಿ ಏಳು ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಮೊಬೈಲ್​ಗಳನ್ನು. ಇನ್ನು ಈತನನ್ನು ಮತ್ತೆ ಕಸ್ಟಡಿಗೆ ತೆಗೆದುಕೊಂಡಿರುವ ಪೊಲೀಸರು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದಾರೆ. ಕೆ.ಪಿ.ಅಗ್ರಹಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Comments are closed.