ಕರ್ನಾಟಕ

ರಸ್ತೆಯಲ್ಲಿ ಬಿದ್ದ ಗಾಯಾಳುಗೆ ನೀರು ಕೊಡದೇ ಮೊಬೈಲ್​ನಲ್ಲಿ ವಿಡಿಯೋ ಮಾಡಿದ ಜನ!

Pinterest LinkedIn Tumblr


ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡ ಇಬ್ಬರು ಜೀವ ಉಳಿಸುವಂತೆ ಪರದಾಡುತ್ತಿದ್ದರೂ, ಜನರು ಅವರಿಗೆ ನೀರು ಕೊಡದೇ ಅಮಾನವೀಯತೆ ಮೆರೆದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಸೋಮಣ್ಣ ಹಾಗೂ ಗೋಕುಲ್ ಎಂಬುವವರು​​ ಚಾಮರಾಜನಗರದ ಗುಂಡ್ಲುಪೇಟೆಯಿಂದ ಊಟಿಗೆ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 62ರಲ್ಲಿ KSRTC ಬಸ್​​​ ಹಾಗೂ ಬೈಕ್​​ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತಗೊಂಡಾಗ ಯುವಕರು ನೀರು ನೀರು ಎಂದು ಕೇಳಿಕೊಂಡರೂ ಸಹ ಯಾರು ಅವರಿಬ್ಬರ ಸಹಾಯಕ್ಕೆ ಬರಲಿಲ್ಲ ಎನ್ನಲಾಗಿದೆ.

ಇನ್ನು ಬಸ್ ಕಂಡಕ್ಟರ್ ಕೂಡ ಅಪಘಾತಗೊಂಡವರಿಗೆ ನೀರು ಕೊಡದೆ ಸಾರ್ವಜನಿಕರೊಂದಿಗೆ ಮೊಬೈಲ್ ನಲ್ಲಿ ವೀಡಿಯೋ ಸೆರೆಹಿಡಿಯುವದರಲ್ಲಿ ಬ್ಯುಸಿಯಾಗಿದ್ದಾರೆ. ಹೀಗೆ ಮನುಷ್ಯನು ಮೊಬೈಲ್ ಮೇಲೆ ಬಹಳ ಹೆಚ್ಚು ಅವಲಂಬಿಸಿದ್ದು, ಮನುಷ್ಯ ಮನುಷ್ಯರ ನಡುವೆ ಇರಬೇಕಾದ ಮಾನವೀಯತೆಯನ್ನೇ ಮರೆತಿರೋದಿಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

Comments are closed.