ಕರ್ನಾಟಕ

ಕುಮಾರಸ್ವಾಮಿ ಮಾಡುತ್ತಿರುವುದು ಒಳ್ಳೆಯ ಕೆಲಸ : ಈಶ್ವರಪ್ಪ

Pinterest LinkedIn Tumblr


ಬಾಗಲಕೋಟೆ: ನಿಜಕ್ಕೂ ನಾನು ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಟೀಕೆ ಮಾಡೋಕೆ ಹೋಗಲ್ಲ, ಗ್ರಾಮ ವಾಸ್ತವ್ಯ ಒಳ್ಳೆಯ ವಿಚಾರ ಎಂದು ಬಿಜೆಪಿ ಮುಖಂಡ ಕೆ. ಎಸ್. ಈಶ್ವರಪ್ಪ ಅಚ್ಚರಿ ಹೇಳಿಕೆ ನೀಡಿದರು.

ಗ್ರಾಮ ವಾಸ್ತವ್ಯದಿಂದ ಸರ್ಕಾರಿ ಶಾಲೆ ಅಭಿವೃದ್ಧಿಯಾಗಲಿ
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮೇಜು, ಕುರ್ಚಿ ಸರಿಯಾಗಿಲ್ಲ, ಸರ್ಕಾರಿ ಶಾಲೆ ಸುಧಾರಣೆ ಮಾಡಿದರೆ ಒಳ್ಳೆಯದು. ಗ್ರಾಮ ವಾಸ್ತವ್ಯದಿಂದ ಸರ್ಕಾರಿ ಶಾಲೆ ಅಭಿವೃದ್ಧಿಯಾಗಲಿ, ಸರ್ಕಾರಿ ಶಾಲೆಗೆ ಬಡಮಕ್ಕಳು ಹೋಗ್ತಾರೆ. ಸರ್ಕಾರಿ ಶಾಲೆಗಳಿಗೆ ರೂಪತರುವಂತೆ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಈಶ್ವರಪ್ಪ ಕಿವಿಮಾತು ಹೇಳಿದರು.

ನಾವಾಗಿಯೇ ಸರ್ಕಾರ ಬೀಳಿಸೋಲ್ಲ
ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಬರುತ್ತೇ ಅನ್ನೋ ಬಿಜೆಪಿ ನಾಯಕರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈಗ ಸರ್ಕಾರ ಇದೇ ಅಂತ ನಿಮಗೆ ಅನ್ನಿಸುತ್ತಾ!? ರೋಷನ್ ಬೇಗ್, ರಾಮಲಿಂಗಾರೆಡ್ಡಿ ಹೇಳಿಕೆ ನೋಡಿದರೆ ಎಷ್ಟು ದಿನ ಅನ್ನಿಸಿಕೊಳ್ಳುತ್ತಾರೆ. ಅಧಿಕಾರದಲ್ಲಿರಬೇಕೆಂದು ಗೌರವ ಕಳೆದುಕೊಂಡಿದ್ದಾರೆ. ಸ್ಥಾನದಲ್ಲಿ ಇರಬೇಕೆಂದು ಕಾಂಗ್ರೆಸ್ ಜೆಡಿಎಸ್ ನವರು ಪ್ರಯತ್ನ ಮಾಡ್ತಿದ್ದಾರೆ. ಕಾಂಗ್ರೆಸ್ , ಜೆಡಿಎಸ್ ನಾಯಕರು ಸರ್ಕಾರದ ವಿರುದ್ಧ ನೇರವಾಗಿ ಟೀಕೆ ಮಾಡ್ತಿದ್ದಾರೆ. ನಾನು ಭವಿಷ್ಯ ಹೇಳೋಲ್ಲ, ನಾವಾಗಿಯೇ ಸರ್ಕಾರ ಬೀಳಿಸೋಲ್ಲ, ಅದಾಗೆ ಸರ್ಕಾರ ಬಿದ್ದು ಹೋಗುತ್ತೆ. ಸರ್ಕಾರ ಬಿದ್ದು ಹೋದಾಗ ರಾಜ್ಯ, ರಾಷ್ಟ್ರ ನಾಯಕರು ತೀರ್ಮಾನ ತೆಗೆದುಕೊಳ್ತಾರೆ. ರಾಷ್ಟ್ರ ನಾಯಕರು ಬುದ್ದಿವಂತೀರಿದ್ದಾರೆ. ಬುದ್ದಿವಂತಿರೋದ್ರಿಂದಲೇ ರಾಷ್ಟ್ರ ದಲ್ಲಿ ನಮ್ಮ ಸರ್ಕಾರ ಬಂದಿದೆ ಮುಂದೆ ಕಾದುನೋಡ್ತೇವೆ ಎಂದು ನುಡಿದರು.

ಸೋತವರ ಬಗ್ಗೆ ಹೆಚ್ಚು ಮಾತನಾಡೋಕೆ ಹೋಗಲ್ಲ
ಲೋಕಸಭಾ ಚುನಾವಣೆ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹಿರಿಯ ನಾಯಕರು ಸಿಡಿದೆದ್ದ ವಿಚಾರವಾಗಿ ಮಾತನಾಡಿದ ಅವರು. ಸೋತವರ ಬಗ್ಗೆ ಹೆಚ್ಚು ಮಾತನಾಡೋಕೆ ಹೋಗಲ್ಲ, ಸಿದ್ದರಾಮಯ್ಯ ಅನ್ನೋದಕ್ಕಿಂತಲೂ. ಎಲ್ಲರನ್ನೂ ವಿಶ್ವಾಸ ತೆಗೆದುಕೊಂಡಾಗ ಹಿರೋ. ಇಲ್ಲದೆಯಿದ್ದಾಗ ವಿಲನ್ ಆಗ್ತಾರೆ. ಮುಂದೆ ವಿಶ್ವಾಸಕ್ಕೆ ತಗೆದುಕೊಂಡರೆ ಒಳ್ಳೆಯದು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಕಾಂಗ್ರೆಸ್​ನಲ್ಲಿ ವಿಲನ್ ಆಗಿದ್ದಾರೆಂದು ಈಶ್ವರಪ್ಪ ಹೇಳಿದರು.

Comments are closed.