ಮನೋರಂಜನೆ

3 ದಿನದಿಂದ ಮನೆಯಿಂದ ಹೊರಬರಲಾಗದೇ ಉಳಿದ ದರ್ಶನ್!

Pinterest LinkedIn Tumblr


ಬಿಬಿಎಂಪಿ ಎಡವಟ್ಟಿನಿಂದಾಗಿ ಚಾಲೆಂಜಿಂಗ್​ ಸ್ಟಾರ್ ದರ್ಶನ ಮನೆಯಿಂದ ಹೊರಹೋಗಲಾಗದೇ ಒದ್ದಾಡುತ್ತಿದ್ದಾರಂತೆ. ಅಂತಹದ್ದೇನಾಯಿತು ಅಂದ್ರಾ ಕಳೆದ ಮೂರು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಆರ್.ಆರ್.ನಗರದಲ್ಲಿರುವ ದರ್ಶನ ಮನೆಯ ಕಂಪೌಂಡ್​ ಮೇಲೆ ಮರವೊಂದು ಬಿದ್ದಿದ್ದು, ಮರ ತೆರವುಗೊಳಿಸದ ಕಾರಣ ದರ್ಶನ ಕಂಗಲಾಗಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ ನಿವಾಸದ ಕಂಪೌಂಡ್​ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದಿದೆ. ಇದು ಬಿದ್ದು ಮೂರು ದಿನಗಳಾದ್ರೂ ಇನ್ನು ತೆರವುಗೊಳಿಸಲಾಗಿಲ್ಲ. ಅಲ್ಲದೇ ಆ ರಸ್ತೆಯಲ್ಲಿ ವಾಹನಗಳ ಸಂಚಾರ ಕೂಡ ಕಷ್ಟವಾಗಿದೆ. ದರ್ಶನ್ ಮನೆಯ ಕಾಂಪೌಂಡ್​ಗೆ ತಾಗಿಕೊಂಡು ಮರ ಧರೆಗುರುಳಿದೆ. ಇದರಿಂದ ದರ್ಶನ್​​ ಕಾರು ಸಹ ಹೊರ ತಗೆಯಲು ಆಗುತ್ತಿಲ್ಲ, ಜೊತೆಗೆ ಆ ರಸ್ತೆಯಲ್ಲಿ ವಾಹನಗಳು ಸಂಚಾರಿಸಲು ಸಹ ಸಮಸ್ಯೆಯಾಗುತ್ತಿದೆ.

ಮರಬಿದ್ದು ಮೂರು ದಿನಗಳೇ ಕಳೆದರೂ ಕೂಡ ಬಿಬಿಎಂಪಿ ಅಧಿಕಾರಿಗಳಾಗಲೀ, ಕಾರ್ಪೊರೇಟರ್​​ಗಳಾಗಲೀ ಯಾವುದೇ ಕ್ರಮ ಕೈಗೊಂಡಿಲ್ಲ. ಒಬ್ಬ ಸ್ಟಾರ್ ನಟನ ನಿವಾಸದ ಮುಂದೆಯೇ ಮರ ಬಿದ್ದು ಸಮಸ್ಯೆಯಾಗಿದ್ದರೂ ಅದನ್ನು ಬಗೆಹರಿಸಲಾಗದಿದ್ದ ಬಿಬಿಎಂಪಿ ಅಧಿಕಾರಿಗಳು ಇನ್ನೂ ಸಾಮಾನ್ಯ ಜನರ ಸಮಸ್ಯೆಗಳಿಗೆ ಇನ್ನೆಷ್ಟು ಬೇಗ ಸ್ಪಂದಿಸಿ ಬಗೆಹರಿಸುತ್ತಾರೆ .ಎಂದು ಜನರು ಪ್ರಶ್ನಿಸಲು ಆರಂಭಿಸಿದ್ದಾರೆ.

Comments are closed.