ಕರ್ನಾಟಕ

ಪ್ರಜ್ವಲ್ ರೇವಣ್ಣ ರಾಜೀನಾಮೆ ವಿಚಾರ ಇದು ನಾಟಕ

Pinterest LinkedIn Tumblr


ಬೆಂಗಳೂರು: ಪ್ರಜ್ವಲ್ ರೇವಣ್ಣ ರಾಜೀನಾಮೆ ವಿಚಾರ ಇದು ನಾಟಕ. ನಂಬೋ ವಿಚಾರ ಅಲ್ಲ ಎಂದು ಮಾಜಿ ಎಂ.ಎಲ್.ಸಿ ಬಿ.ಜೆ ಪುಟ್ಟಸ್ವಾಮಿ ಹೇಳಿದ್ದಾರೆ.

ರಾಜ್ಯದ ಜನತೆಗೆ ಮರಳು ಮಾಡುವ ತಂತ್ರ

ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡಲು ಮುಂದಾದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಇದು ರಾಜ್ಯದ ಜನತೆಗೆ ಮರಳು ಮಾಡುವ ತಂತ್ರ, ಒಂದು ವೇಳೆ ರಾಜೀನಾಮೆ ಕೊಟ್ಟರೆ ಖಂಡಿತವಾಗಿ ನಾವು ಇನ್ನೊಂದು ಸೀಟು ಜಾಸ್ತಿ ಮಾಡ್ಕೊತೀವಿ ಎಂದರು.

ಸೊಸೆಯಂದಿರು, ಮೊಮ್ಮಕ್ಕಳು, ಎಲ್ಲರನ್ನೂ ರಾಜಕೀಯಕ್ಕೆ ಕರೆತಂದರು

ನನ್ನ ಎರಡು ಮಕ್ಕಳನ್ನು ಬಿಟ್ಟು ಯಾರೂ ರಾಜಕೀಯಕ್ಕೆ ಬರಲ್ಲ ಅಂತ ದೇವೆಗೌಡರು ಹೇಳಿದರು. ಆದರೆ ಆ ಮೇಲೆ ಸೊಸೆಯಂದಿರು, ಮೊಮ್ಮಕ್ಕಳು, ಎಲ್ಲರನ್ನೂ ರಾಜಕೀಯಕ್ಕೆ ಕರೆತಂದರು. ಅವರ ಉದ್ದೇಶ ಜನರಿಗೆ ತಿಳಿಯಿತು ಎಂದು ಹೇಳಿದರು. ಮಾಜಿ ಪ್ರಧಾನಿ ದೇವೆಗೌಡರನ್ನು ಯಾರು ಉತ್ತುಂಗಕ್ಕೆ ತಂದಿದರೂ ಇಂದು ಅವರೇ ಮನೆಯಲ್ಲಿ ಕೂರಿಸಿದ್ದಾರೆ ಎಂದು ಪುಟ್ಟಸ್ವಾಮಿ ಇದೇ ವೇಳೆ ತಿಳಿಸಿದರು.

Comments are closed.