ಕರ್ನಾಟಕ

ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಶತಸಿದ್ಧ, ಸೋಲನ್ನು ಮರ್ಯಾದೆಯಿಂದ ಒಪ್ಪಿಕೊಳ್ಳಿ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಪಕ್ಷ ಧೂಳಿಪಟವಾಗಿದೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಶತಸಿದ್ಧ,ಯಾರು ಸಿಎಂ ಆಗೊದನ್ನು ತಪ್ಪಿಸಲು ಆಗಲ್ಲ ಎಂದು ಮಾಜಿ ಡಿಸಿಎಂ ಆರ್ ಅಶೋಕ್ ಹೇಳಿದ್ದಾರೆ.

ಕಾಂಗ್ರೆಸ್ ಮುಕ್ತ ಭಾರತ ಆಗುತ್ತಿದೆ

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಜನ ಮತ್ತೊಮ್ಮೆ ಮೋದಿ ಆಯ್ಕೆ ಸ್ಪಷ್ಟವಾಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಬಿಜೆಪಿ ವಿಸ್ತಾರವಾಗಿದೆ. ಕಾಂಗ್ರೆಸ್ ಮುಕ್ತ ಭಾರತ ಆಗುತ್ತಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರದ ಆಡಳಿತ ಈಗ ಗೊತ್ತಾಗುತ್ತಿದೆ. ದೇವೇಗೌಡರು ಧೂಳಿಪಾಟ ಆಗುತ್ತಿರೊದು ಕಾಣುತ್ತಿದೆ. ಮಂಡ್ಯದಲ್ಲಿಯೂ ಕೂಡ ಸುಮಲತಾ ಮುಂದೆ ಬರುತ್ತಿದ್ದಾರೆ. ರಾಜ್ಯದ ಅಪವಿತ್ರ ಮೈತ್ರಿಗೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಜನರು ಈ ಮೂಲಕ ಮತ್ತೆ ಯಡಿಯೂರಪ್ಪ ಆಡಳಿತವನ್ನು ಜನ ನಿರೀಕ್ಷೆ ಮಾಡಿದ್ದಾರೆ. ಕಳೆದ ಬಾರಿಗಿಂತ ಬಿಜೆಪಿ ಈ ಬಾರಿ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

ಎಲ್ಲರೂ ಬಾಯಿ ಮೇಲೆ ಬೆರಳು ಇಡುವ ಸಂದರ್ಭ ಬಂದಿದೆ

ಜನ ನಮ್ಮ ಜತೆ ಇದ್ದಾರೆ. ಕರ್ನಾಟಕದ ಅಭಿವೃದ್ಧಿ ಯಡಿಯೂರಪ್ಪ ಅವರಿಂದ ಆಗಲಿದೆ. ಈ ಫಲಿತಾಂಶ ಜನರು ಯಡಿಯೂರಪ್ಪ ಸಿಎಂ ಆಗಲಿ ಎಂದು ಸಂದೇಶ ಸಹ ನೀಡಿದ್ದಾರೆ. ರಾಜ್ಯದ ಜನರಿಗೆ ಅಭಿನಂದನೆಗಳು ಎಲ್ಲರೂ ಬಾಯಿ ಮೇಲೆ ಬೆರಳು ಇಡುವ ಸಂದರ್ಭ ಬಂದಿದೆ. ಜನರಿಗೆ ನಾವು ಅಬಾರಿಯಾಗಿದ್ದಿವಿ, ಕುಣಿಲಾಗದವರಿಗೆ ನೆಲಡೊಂಕು ಎಂಬ ಮಾತು ಇವರಿಗೆ ಹೋಲಿಕೆ ಆಗಲಿದೆ ಎಂದು ಮೈತ್ರಿ ಸರ್ಕಾರದವರ ವಿರುದ್ಧ ಕಿಡಿಕಾರಿದರು.

ಸೋಲನ್ನು ಮಾರ್ಯಾದೆಯಿಂದ ಒಪ್ಪಿಕೊಳ್ಳಿ

ಮಹಾಘಟ್​ಬಂಧನ್ ಬಲಾಡ್ಯರು ಗೆದ್ದಾಗ ಇವಿಎಂ ಚೆನ್ನಾಗಿತು, ಈಗ ಚೆನ್ನಾಗಿಲ್ಲ ಎಂದರೇ ಏನು ಅರ್ಥ, ರಾಜ್ಯದಲ್ಲಿ ಸಮಿಶ್ರ ಸರ್ಕಾರ ಬಂದಾಗ ಇವಿಎಂ ಸರಿ ಇತ್ತಾ ? ಕಾಂಗ್ರೆಸ್ ಬಂದರೆ ಇವಿಎಂ ಬ್ಯೂಟಿಫುಲ್ ಅಲ್ವಾ ಎಂದು ಪ್ರಶ್ನೆ ಮಾಡಿದರು. ಸೋಲನ್ನು ಮಾರ್ಯಾದೆಯಿಂದ ಒಪ್ಪಿಕೊಳ್ಳಿ ಇದು ಸರಿಯಲ್ಲ, ಜನರ ತೀರ್ಪನ್ನು ಕಾರಣ ನೀಡದೇ ಒಪ್ಪಿಕೊಳ್ಳಿ ಎಂದು ಆರ್.ಅಶೋಕ್ ಹೇಳಿದರು.

Comments are closed.