ಕರ್ನಾಟಕ

ಮಂಡ್ಯದಲ್ಲಿ ಜೆಡಿಎಸ್ ಪ್ರಚಾರಕ್ಕೆ ಹೊರಗಿನಿಂದ ಜನ ತಂದರೆ ತಲಾ 500 ರೂ.; ಆಡಿಯೋ ವೈರಲ್

Pinterest LinkedIn Tumblr

ಬೆಂಗಳೂರು: ಮಂಡ್ಯದಲ್ಲಿ ಪ್ರಚಾರಕ್ಕಾಗಿ ಜೆಡಿಎಸ್ ಮುಖಂಡರು ಹೊರಗಿನಿಂದ ಜನ ಕರೆಸುತ್ತಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಜೆಡಿಎಸ್ ಸಂಸದ ಎಲ್ ಆರ್ ಶಿವರಾಮೇಗೌಡರ ಫೋನ್ ಸಂಭಾಷಣೆ ಈ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಈ ಸಂಬಂಧ ಶಿವರಾಮೇಗೌಡ ಮಂಡ್ಯದ ಡಾನ್ ರಮೇಶ್ ಎಂಬುವರ ಜೊತೆ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ಸಾಮಾಜಿರ ಜಾಲತಾಣದಲ್ಲಿ ವೈರಲ್ ಆಗಿದೆ, ಚುನಾವಣಾ ಪ್ರಚಾರಕ್ಕೆ ಹೊರಗಿನಿಂದ ಜನರನ್ನು ಕರೆದುಕೊಂಡು ಬಂದರೆ, ತಲಾ 500 ರೂಪಾಯಿ ಕೊಡುವುದಾಗಿ ಶಿವರಾಮೇಗೌಡ ಹೇಳಿರುವ ಆಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚೀಣ್ಯ ಗ್ರಾಮದ ಡಾನ್ ರಮೇಶ್ ಎನ್ನುವವರ ಜತೆ ಮಾತನಾಡಿರೊ ಶಿವರಾಮೇಗೌಡ, ಬೆಂಗಳೂರಿನಿಂದ ಜನರನ್ನು ಕರೆತನ್ನಿ. ತಲೆಗೆ 500 ರೂಪಾಯಿ ಕೊಡುತ್ತೇವೆ.ಕರೆತರಲು ವಾಹನದ ವ್ಯವಸ್ಥೆ ಮಾಡಿ ಎಂದು ಹೇಳಿದ್ದಾರೆಂದು ತಿಳಿದು ಬಂದಿದೆ.

Comments are closed.