ಹಾಸನ: ಹಾಸನ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಮಾಜಿ ಸಚಿವ ಎ. ಮಂಜು ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ಆಕ್ರೋಶಗೊಂಡಿರುವ ಬಿಜೆಪಿ ನಾಯಕ ಯೋಗಾ ರಮೇಶ್ ಅವರು ಬಿಜೆಪಿ ತೊರೆಯಲು ನಿರ್ಧರಿಸಿದ್ದಾರೆ. ಅವರು ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ.
ಅರಕಲಗೂಡು ವಿಧಾನಸಭೆ ಕ್ಷೇತ್ರದಲ್ಲಿ ಎ. ಮಂಜು ಮತ್ತು ಯೋಗಾ ರಮೇಶ್ ಬದ್ಧ ವೈರಿಗಳು ಎನಿಸಿಕೊಂಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಈ ಇಬ್ಬರೂ ನಾಯಕರು ಮುಖಾಮುಖಿಯಾಗಿದ್ದರು. ಜೆಡಿಎಸ್ನ ಎ.ಟಿ ರಾಮಸ್ವಾಮಿ ಎದುರು ಇಬ್ಬರೂ. ಸದ್ಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕಾರಣಕ್ಕೇ ಮಂಜು ಬಿಜೆಪಿಗೆ ಬಂದಿರುವುದರಿಂದ ಯೋಗಾ ರಮೇಶ್ ಬಿಜೆಪಿ ತೊರೆಯುತ್ತಿದ್ದಾರೆ.
ಮಂಜು ಬಿಜೆಪಿ ಸೇರ್ಪಡೆಯಾಗುವುದನ್ನು ಯೋಗಾ ರಮೇಶ್ ಆರಂಭದಲ್ಲೇ ವಿರೋಧಿಸಿದ್ದರು. ಮಂಜು ಒಬ್ಬ ಹಳಸಲು ಆಹಾರ ಎಂದೆಲ್ಲ ಮೂದಲಿಸಿದ್ದರು. ತಮ್ಮ ಅಭಿಪ್ರಾಯವನ್ನೂ ಲೆಕ್ಕಿಸದೇ ಮಂಜು ಅವರನ್ನು ಬಿಜೆಪಿಗೆ ಸೇರಿಸಿಕೊಂಡಿರುವುದು ರಮೇಶ್ ಅವರಿಗೆ ಬೇಸರ ತರಿಸಿದೆ ಎನ್ನಲಾಗಿದೆ.
Comments are closed.