ಈ ಬಾರಿಯ ಲೋಕಸಭೆ ಚುನಾವಣೆ ಫಲಿತಾಂಶ ಬಹಳ ಮಹತ್ವ ಪಡೆದುಕೊಳ್ಳಲಿದೆ. ಕಳೆದ ಬಾರಿ ಯಾರೂ ಊಹಿಸದ ರೀತಿಯಲ್ಲಿ ಮೋದಿ ನೇತೃತ್ವದ ಎನ್ಡಿಎ ಗದ್ದುಗೆ ಏರಿತ್ತು. ಒಂದೊಮ್ಮೆ ಈ ಬಾರಿ ಅದೇ ಫಲಿತಾಂಶ ಪುನರಾವರ್ತನೆಯಾದರೆ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳುತ್ತದೆ. ಮಾತ್ರವಲ್ಲ, ನೆಹರು-ಗಾಂಧಿ ಕುಟುಂಬದ ಮುಂದಿನ ರಾಜಕೀಯ ಬದುಕೇನು ಎನ್ನುವ ಪ್ರಶ್ನೆಯೂ ಕಾಡುತ್ತದೆ.
ಇತಿಹಾಸವನ್ನು ಒಮ್ಮೆ ತಿರುಗಿ ಹಾಕಿದರೆ, ನೆಹರು-ಗಾಂಧಿ ಕುಟುಂಬದಿಂದ ಬಂದ ಪ್ರತಿಯೊಬ್ಬರೂ ಯಶಸ್ಸು ಕಂಡಿದ್ದಾರೆ. ಜವಾಹರ್ಲಾಲ್ ನೆಹರು ಹಾಗೂ ಇಂದಿರಾ ಗಾಂಧಿ ಅಧಿಕಾರದಲ್ಲಿದ್ದಾಗಲೇ ಕೊನೆ ಉಸಿರೆಳೆದರು. ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ರಾಜೀವ್ ಗಾಂಧಿ ಆತ್ಮಾಹುತಿ ದಾಳಿಗೆ ಬಲಿಯಾದರು. ಇನ್ನು, ಸೋನಿಯಾ ಗಾಂಧಿ ನೇತೃತ್ವದ ಯುಪಿಎ 2004 ಹಾಗೂ 2009ರಲ್ಲಿ ಅಧಿಕಾರಕ್ಕೆ ಬಂದಿತ್ತು. ಹಾಗಾಗಿ, ಗಾಂಧಿ ಕುಟುಂಬದವರಿಗೂ ಯಶಸ್ಸಿಗೂ ನಂಟಿದೆ ಎಂಬುದನ್ನು ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಮತ್ತೆ ಸಾಬೀತು ಮಾಡಬೇಕಿದೆ.
ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಬಂದಿರುವುದು ಕಾಂಗ್ರೆಸ್ಗೆ ಸ್ವಲ್ಪ ಬಲ ಸಿಕ್ಕಿದೆ. ಕೆಲ ಸಣ್ಣ ಪಕ್ಷಗಳ ಬೆಂಬಲ ಪಡೆದುಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. ಈ ಬಾರಿ ಕೇಂದ್ರದಲ್ಲಿ ಮತ್ತೆ ಸರ್ಕಾರ ರಚಿಸುವ ಆಲೋಚನೆಯಲ್ಲಿದೆ ಕಾಂಗ್ರೆಸ್.
ಮೈತ್ರಿ ಮಾಡಿಕೊಳ್ಳುವ ವಿಚಾರ ಕಾಂಗ್ರೆಸ್ಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಕಾಂಗ್ರೆಸ್ಅನ್ನು ಸಂಪೂರ್ಣವಾಗಿ ಹೊರಗಿಟ್ಟಿದ್ದವು. ದೆಹಲಿಯಲ್ಲೂ ಕಾಂಗ್ರೆಸ್ಗೆ ಮೈತ್ರಿ ಸಾಧ್ಯವಾಗಿಲ್ಲ.
ಆರಂಭದಲ್ಲಿ ದೇಶವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಕಾಂಗ್ರೆಸ್ ಹೊತ್ತುಕೊಂಡಿತ್ತು. 1939ರಲ್ಲಿ ನಡೆದ ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಭಾಷ್ ಚಂದ್ರ ಬೋಸ್ ವಿರುದ್ಧ ಸೀತಾರಮಯ್ಯ ಸೋತಿದ್ದರು. 1948ರಲ್ಲಿ ಇವರು ಜೈಪುರದಲ್ಲಿ ಭಾಷಣ ಒಂದನ್ನು ಮಾಡಿದ್ದರು. ಈ ವೇಳೆ ಕಾಂಗ್ರೆಸ್ ಸಿದ್ಧಾಂತಗಳು ದೇಶಕ್ಕೆ ಬಹಳ ಸನಿಹವಾಗಿವೆ ಎಂದು ಅವರು ಹೇಳಿಕೊಂಡಿದ್ದರು.
1955ರಲ್ಲಿ ನಡೆದ ಎಐಸಿಸಿ ಸಭೆಯಲ್ಲಿ ಮಾತನಾಡಿದ್ದ ಎಐಸಿಸಿ ಮುಖ್ಯಸ್ಥ ಯುಎನ್ ಧೆಬಾರ್, “ಕಾಂಗ್ರೆಸ್ ಎಂದರೆ ಕಣ್ಣೀರು. ದುಃಖದಲ್ಲಿರುವ ಹಾಗೂ ನೋವುಗಳನ್ನು ತಿಂದವರ ಕಣ್ಣಿನಿಂದ ಬೀಳುತ್ತಿರುವ ಕಣ್ಣೀರು. ಈ ಕಣ್ಣೀರು ಹಳ್ಳವಾಗಬಹುದು. ಈ ಹಳ್ಳಗಳು ಸೇರಿ ನದಿಯಾಗಬಹುದು. ಈ ನದಿ ಗಂಗಾ ಆಗಿರಬಹುದು ಅಥವಾ ಬ್ರಹ್ಮಪುತ್ರ ಆಗಿರಬಹುದು. ಈ ನದಿಗಳು ಜನರ ಕಷ್ಟಗಳನ್ನು ತೊಳೆದು ಅವರಿಗೆ ಹೊಸ ಜೀವನ ನೀಡುತ್ತದೆ,” ಎಂದಿದ್ದರು. ಈ ಮೂಲಕ ಕಾಂಗ್ರೆಸ್ನ ನಿಲುವನ್ನು ಸಾರಿದ್ದರು.
ಆದರೆ, 1998ರಲ್ಲಿ ಸೋನಿಯಾ ಗಾಂಧಿ ಪಕ್ಷದ ಚುಕ್ಕಾಣಿ ಹಿಡಿದಾಗ ಕಾಂಗ್ರೆಸ್ನ ನಿಲುವು ಕೊಂಚ ಬದಲಾಯಿತು. ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸೋನಿಯಾ ಒಲವು ತೋರಿದರು. ಅವರು ಕೆಲ ಯಶಸ್ವಿ ನಿಯಮಗಳನ್ನು ಜಾರಿಗೆ ತಂದರು.
ಈಗ ನರೇಂದ್ರ ಮೋದಿ ವಿರುದ್ಧ ರಾಹುಲ್ ಸೆಣೆಸಾಡಲು ನಿಂತಿದ್ದಾರೆ. ಆದರೆ, ರಾಹುಲ್ ಬದಲು ಹೊರಗಿನವರನ್ನು ತಂದು ನಿಲ್ಲಿಸಿದರೆ ಉತ್ತಮ ಎನ್ನುವ ಆಲೋಚನೆ ಕೆಲ ಕಾಂಗ್ರೆಸ್ ನಾಯಕರದ್ದು. ಇದರಿಂದ, ರಾಹುಲ್ ಗಾಂಧಿ ರಾಜಕೀಯದಲ್ಲಿ ಮತ್ತಷ್ಟು ಪಳಗುತ್ತಾರೆ. ಅಲ್ಲಿಯವರೆಗೆ ಪ್ರಾದೇಶಿಕ ಪಕ್ಷಗಳಿಗೆ ಅಧಿಕಾರ ನೀಡಬೇಕು. ಹೀಗೊಂದು ಆಲೋಚನೆಯನ್ನು ಕೆಲ ಕಾಂಗ್ರೆಸ್ ನಾಯಕರು ಮಾಡಿದ್ದಾರೆ. ಇದು ಅಸಾಧ್ಯ ಎನ್ನುವ ಮಾತುಗಳೂ ಕೇಳಿ ಬಂದಿವೆ. 2019ರ ಲೋಕಸಭೆ ಚುನಾವಣೆ ಫಲಿತಾಂಶ ಇದಕ್ಕೆಲ್ಲ ಉತ್ತರ ನೀಡಬೇಕಿದೆ.
Comments are closed.