ಕಲಬುರಗಿ: ಪಾಕಿಸ್ತಾನಕ್ಕೆ ಮಧ್ಯರಾತ್ರಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ಮುಖಾಂತರ ಅದರ ಬೆನ್ನು ಮುಳೆ ಮುರಿದ ಮೋದಿ, ಇದೀಗ ಸಂಸತ್ತಿನಲ್ಲಿ ಅವರಿಗೆ ಪ್ರಬಲವಾಗಿ ದಿಟ್ಟ ಉತ್ತರ ನೀಡುವ ಮಲ್ಲಿಕಾರ್ಜುನ ಖರ್ಗೆ ಮಣಿಸಲು ಬುಧವಾರ ಮಧ್ಯಾಹ್ನವೇ ಖುದ್ದು ಮೋದಿ ಕಲಬುರಗಿಗೇ ಆಗಮಿಸುತ್ತಿದ್ದಾರೆ.
ಸದ್ಯ ಸಂಸತ್ತಿನಲ್ಲಿ ಪ್ರಧಾನಿ ಮೋದಿಯ ಪ್ರತಿ ಮಾತಿಗೂ ಹರಿತವಾಗಿ ದಿಟ್ಟ ಉತ್ತರ ನೀಡುತ್ತಿದ್ದ ಮಲ್ಲಿಕಾರ್ಜುನ ಖರ್ಗೆಗೇ, ಈ ಬಾರಿ ಶತಾಯಗತಾಯ ಸೋಲಿಸಲು ಪ್ರಧಾನಿ ಮೋದಿ ಟೀಂ ಇದೀಗ ಸಿದ್ಧವಾಗಿದೆ. ಈ ಬಾರಿ ಕಲಬುರಗಿ ಕ್ಷೇತ್ರದಲ್ಲಿ ಖರ್ಗೆರನ್ನು ಸೋಲಿಸಿ ಕಮಲ ಅರಳಿಸಲು ಖುದ್ದು ಮೋದಿ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದು, ಖರ್ಗೆ ಸೋಲಿಸಲು ಕೈ ಶಾಸಕ ಡಾ.ಉಮೇಶ್ ಜಾಧವ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಮೂಲಕ ಖರ್ಗೆ ಅವರ ಕಲಬುರಗಿ ಕೋಟೆ ಭೇಧಿಸಲು ಮೋದಿ ಆ್ಯಂಡ್ ಟೀಂ ಸಜ್ಜಾಗಿದ್ದಾರೆ. ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಲಬುರಗಿಯ ನೂತನ ವಿದ್ಯಾಲಯ ಮೈದಾನದಲ್ಲಿ ಬಿಜೆಪಿಯ ಬೃಹತ ಸಮಾವೇಶ ನಡೆಯಲ್ಲಿದ್ದು, ಕಾರ್ಯಕರ್ತರನ್ನು ಪ್ರಧಾನಿ ಮೋದಿ ತಮ್ಮ ಮಾತುಗಳಿಂದ ಹುರಿದುಂಬಿಸಲಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ ಕಲಬುರಗಿ ಕೋಟೆಯ ಮೇಲೆ ಕಮಲ ಅರಳಿಸಲು ತ್ರಿಮೂತ್ರಿಗಳಾದ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಬಾಬುರಾವ್ ಚಿಂಚನಸೂರ್ ಮತ್ತು ಉಮೇಶ್ ಜಾಧವ್ ರಣತಂತ್ರ ರಚಿಸುತ್ತಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಾಳಯ ಸೇರುತ್ತಿರುವ ಡಾ.ಉಮೇಶ್ ಜಾಧವ್ ಅವರನ್ನು ಖರ್ಗೆ ಎದುರಿಗೆ ನಿಲ್ಲಿಸಲು ಎಲ್ಲ ರೀತಿಯ ತಯಾರಿಗಳು ನಡೆದಿವೆ. ಈ ಚುನಾವಣೆಯನ್ನು ಬಿಜೆಪಿಯ ಮೂರು ಜನ ಶಾಸಕರು ಸೇರಿದಂತೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಮೋದಿ ಕರೆ ಕೊಟ್ಟಿದ್ದು, ಈ ಬಾರಿ ಶತಾಯ ಗತಾಯ ಖರ್ಗೆ ಸೋಲಿಸಲು ಕೇಸರಿ ಪಕ್ಷ ಪಣ ತೊಟ್ಟಿದೆ ಎನ್ನಲಾಗುತ್ತಿದೆ.
ಒಂದೆಡೆ ಜಿಲ್ಲೆಯ ಕೋಲಿ ಸಮಾಜದ ಮುಖಂಡ ಬಾಬುರಾವ್ ಚಿಂಚನಸೂರ್, ಇನ್ನೊಂದಡೆ ಮಾಲೀಕಯ್ಯ ಗುತ್ತೇದಾರ ಖರ್ಗೆ ಸಹ ಸೋಲಿಸಲು ಮುಂದಾಗಿದ್ದಾರೆ. ಇತ್ತ ಖಮರುಲ್ ಅವರನ್ನ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ವಂಚಿತರಾಗಿ ಮಾಡಿರುವ ಹಿನ್ನೆಲೆ ಮುಸ್ಲಿಂ ಮತದಾರರು ಸಹ ಖರ್ಗೆ ಪರ ಮತ ಚಲಾಯಿಸದೇ ತಟಸ್ಥರಾಗಿರಲು ಯೋಚಿಸುತ್ತಿದ್ದಾರೆ. ಸೋಲಿನ ಹತಾಶೆಯಲ್ಲಿರುವ ಖರ್ಗೆ ಇದು ನನ್ನ ಕೊನೆಯ ಚುನಾವಣೆ ಅಂತಾ ಜನರಿಗೆ ಎಮೋಷನಲ್ ಮಾಡಿ ಮತಗಳಿಸಲು ಮುಂದಾಗಿದ್ದಾರೆ ಎಂದು ಬಿಜೆಪಿ ವ್ಯಂಗ್ಯ ಮಾಡುತ್ತಿದೆ.
ಸದ್ಯ ಮೇಲನೋಟಕ್ಕೆ ಖರ್ಗೆ ಪ್ರಬಲವಾಗಿದ್ರು ಬದಲಾದ ರಾಜಕೀಯದಲ್ಲಿ ಅವರು ಇದೀಗ ಒಂಟಿಯಾದಂತಾಗಿದೆ. ಇನ್ನು ಧರಂಸಿಂಗ್ ಮತ್ತು ಖಮರುಲ್ ಇಸ್ಲಾಂ ಇಲ್ಲದ ಈ ಚುನಾವಣೆಯಲ್ಲಿ ಖರ್ಗೆ ಏಕಾಂಗಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Comments are closed.