ಕರ್ನಾಟಕ

ಶುಕ್ರವಾರದ ಕಾಂಗ್ರೆಸ್ ಸಭೆಗೆ ಎಲ್ಲಾ ಶಾಸಕರಿಗೂ ವಿಪ್ ಜಾರಿ; ಬರದಿದ್ದವರಿಗೆ ಉಚ್ಛಾಟನೆ ಶಿಕ್ಷೆ?

Pinterest LinkedIn Tumblr


ಬೆಂಗಳೂರು: ಆಪರೇಷನ್ ಕಮಲದ ಮೂಲಕ ಭಾರತೀಯ ಜನತಾ ಪಕ್ಷವು ರಾಜ್ಯ ಸರಕಾರಕ್ಕೆ ತಲೆನೋವು ತಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಶಾಸಕಾಂಗ ಪಕ್ಷದ ವಿಶೇಷ ಸಭೆ ಕರೆದಿದೆ. ಬರುವ ಶುಕ್ರವಾರ (ಜನವರಿ 18) ಮಧ್ಯಾಹ್ನ 3:30ಕ್ಕೆ ವಿಧಾನಸೌಧದಲ್ಲಿ ಸಭೆ ಏರ್ಪಡಿಸಲಾಗಿದೆ. ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಸದಸ್ಯರೂ ಸಭೆಯಲ್ಲಿ ಹಾಜರಿರಬೇಕೆಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿಪ್ ಹೊರಡಿಸಿದ್ದಾರೆ.

ಒಂದು ವೇಳೆ, ಈ ಸಭೆಗೆ ಹಾಜರಾಗದಿದ್ದರೆ ಕಾಂಗ್ರೆಸ್ ಪಕ್ಷದಿಂದಲೇ ಉಚ್ಛಾಟಿಸುವ ಎಚ್ಚರಿಕೆಯನ್ನು ನೀಡಲಾಗಿದೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ ನಡೆಯುವ ಈ ಸಭೆಯಲ್ಲಿ ಡಿಸಿಎಂ ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಉಪಸ್ಥಿತರಿರಲಿದ್ದಾರೆ.

ಬಿಜೆಪಿ ನಡೆದ ಆಪರೇಷನ್ ಕಮಲ ನಡೆಸಿದ್ದು, ಬಿಜೆಪಿಯ ಆಮಿಷಕ್ಕೆ ಕೆಲ ಕಾಂಗ್ರೆಸ್ ಶಾಸಕರು ಒಳಗಾಗಿದ್ದು, ಜೆಡಿಎಸ್ ಪಕ್ಷದ ಅಸಮಾಧಾನ ಇತ್ಯಾದಿಗಳನ್ನು ಈ ಸಭೆಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರಗಳನ್ನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

Comments are closed.