ಕರ್ನಾಟಕ

ವಿಷಪ್ರಸಾದ ದುರಂತ: ನಾನೇನು ತಪ್ಪು ಮಾಡಿಲ್ಲ ಎಂದು ಕೂಗಾಡಿದ ಅಂಬಿಕಾ

Pinterest LinkedIn Tumblr


ಚಾಮರಾಜನಗರ: ಸುಳವಾಡಿಯ ವಿಷಮಿಶ್ರಿತ ಪ್ರಸಾದ ದುರಂತ ಪ್ರಮುಖ ಆರೋಪಿಯಾಗಿರುವ ಅಂಬಿಕಾ ತಾನೇನು ತಪ್ಪು ಮಾಡಿಲ್ಲ. ಪೊಲೀಸರು ನನಗೆ ಮೋಸ ಮಾಡಿದ್ದಾರೆ ಎಂದು ಅರಚಾಡಿದ ಘಟನೆ ನಡೆದಿದೆ.

ಶುಕ್ರವಾರ ಪೊಲಿಸರು ಆರೋಪಿಗಳಾದ ಅಂಬಿಕಾ ಮತ್ತು ದೊಡ್ಡಯ್ಯರನ್ನು ನಾಗರಕೋಯಿಲು ದೇವಸ್ಥಾನ, ಅಂಬಿಕಾ ಮನೆಯಲ್ಲಿ ಮಹಜರು ಮಾಡಲು ಕರೆತಂದಿದ್ದರು. ಈ ಸಂದರ್ಭದಲ್ಲಿ ಪೊಲೀಸರು ನಮ್ಮ ಮನೆಯ ಬೀಗ ಪಡೆದು ಅಲ್ಲಿ ವಿಷದ ಬಾಟಲಿ ಇಟ್ಟಿದ್ದಾರೆ ಎಂದು ಕೂಗಾಡಿದ್ದಾಳೆ. ಈ ಸಂದರ್ಭದಲ್ಲಿ ಪೊಲೀಸರು ಅಂಬಿಕಾಳನ್ನು ಸುಮ್ಮನಾಗಿಸಿ ತಮ್ಮೊಂದಿಗೆ ಕರೆದೊಯ್ದಿದ್ದಾರೆ.

ಹರಕೆ ತೀರಿಸಿದ ಭಕ್ತ

ಪ್ರಸಾದದಲ್ಲಿ ವಿಷ ಬೆರೆಸಿದ ಆರೋಪಿಗಳು 150 ಗಂಟೆಗಳಲ್ಲಿ ಸಿಗಲೆಂದು ಹರಕೆ ಹೊತ್ತಿದ್ದ ಭಕ್ತರೊಬ್ಬರು ಇಂದು ತಮ್ಮ ಹರಕೆ ತೀರಿಸಿದ್ದಾರೆ. ಕನಕಪುರದ ನಾಗೇಶ್​ ಎಂಬುವವರು ಸುಳವಾಡಿಯ ಮಾರಮ್ಮ ದೇವಸ್ಥಾನದ ಮುಂದೆ 51 ಈಡುಗಾಯಿ ಒಡೆದು ತಮ್ಮ ಹರಕೆಯನ್ನು ತೀರಿಸಿದ್ದಾರೆ.

Comments are closed.