ಕರ್ನಾಟಕ

ರಾಹುಕಾಲ ಮುಗಿದ ನಂತರ ಕಾರಿನಿಂದಿಳಿದ ರೇವಣ್ಣ!

Pinterest LinkedIn Tumblr


ಬೆಳಗಾವಿ: ಸಚಿವರ ಆಗಮನಕ್ಕಾಗಿ ಎಲ್ಲರೂ ಕಾಯುವುದು ಮೂಮೂಲಿ,ಆದರೆ ಸಚಿವರು ಕಾರಿನಿಂದ ಇಳಿಯುವುದನ್ನು ಎಲ್ಲರೂ ಕಾದ ಘಟನೆ ಶುಕ್ರವಾರ ನಡೆದಿದೆ. ಹೌದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರು ಎಂದಿನಂತೆ ರಾಹುಕಾಲ ಮುಗಿಯುವುದನ್ನು ಕಾದು ಕಾರಿನಿಂದ ಇಳಿದಿದ್ದಾರೆ.

ಪ್ರತೀ ಕಾರ್ಯಕ್ಕೂ ರಾಹುಕಾಲ ಗುಳಿಕ ಕಾಲ ನೋಡುವ ಸಚಿವ ರೇವಣ್ಣ ಬೆಳಗಾವಿ ಕೆಶಿಪ್‌ನ ರಸ್ತೆ ಸುರಕ್ಷತಾ ಅಭಿಯಾನದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಬೆಳಗ್ಗೆ 9.40 ಕ್ಕೆ ಆಗಮಿಸಿದ ಅವರು 9.54 ಕ್ಕೆ ರಾಹುಕಾಲ ಮುಗಿದ ಬಳಿಕ ಕಾರಿನಿಂದ ಇಳಿದಿದ್ದಾರೆ.

ಕಾರಿನಲ್ಲೇ ಕುಳಿತ ಅವರು ದೇವರ ಪ್ರಸಾದದ ಪೊಟ್ಟಣವನ್ನು ತೆಗೆದು ಹಣೆಗೆ ಹಚ್ಚಿಕೊಂಡಿದ್ದಾರೆ. ಬಳಿಕ ಕಾರಿನಿಂದ ಇಳಿದಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆ 10 ಗಂಟೆಗೆ ನಡೆಯಬೇಕಿತ್ತು. ಸಿಎಂ ಕುಮಾರಸ್ವಾಮಿ ಅವರೂ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದರು.

Comments are closed.