ಕರ್ನಾಟಕ

ಮುಖ್ಯಶಿಕ್ಷಕನಿಗೆ ಥಳಿತ: ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಬಂಧನ

Pinterest LinkedIn Tumblr


ಶಿವಸಾಗರ್: ತಾನು ಓದುತ್ತಿದ್ದ ಶಾಲೆಯ ಮುಖ್ಯ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 10ನೇ ತರಗತಿ ವಿದ್ಯಾರ್ಥಿಯನ್ನು ಬಂಧನಕ್ಕೊಳಪಡಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿ ಬಾಲಕನನ್ನು ಶಿವಸಾಗರ ಬಾಲ ನ್ಯಾಯ ಮಂಡಳಿ ಎದುರು ಹಾಜರು ಪಡಿಸಿದ್ದ ಪೊಲೀಸರು ವಿಚಾರಣೆ ಬಳಿಕ ಪೋಷಕರಿಗೊಪ್ಪಿಸಿದ್ದಾರೆ.

ಶಿವಸಾಗರದ ಸರಕಾರಿ ಪ್ರೌಢಶಾಲೆಯಲ್ಲಿ ಗುರುವಾರ 9 ಗಂಟೆಗೆ ಈ ಘಟನೆ ನಡೆದಿದ್ದು , ದೈನಂದಿನ ತರಗತಿ ಆರಂಭವಾಗುವ ಮೊದಲು ಪ್ರತಿನಿತ್ಯದಂತೆ ಪರಿಶೀಲನೆಗೆ ಬಂದಿದ್ದ ಮುಖ್ಯಶಿಕ್ಷಕರ ತಲೆಗೆ ಹೊಡೆದಿದ್ದ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಅವರು ಪ್ರಜ್ಞೆ ಕಳೆದುಕೊಳ್ಳುವಂತೆ ಮಾಡಿದ್ದ.

ವಿದ್ಯಾರ್ಥಿಯ ದುರ್ವರ್ತನೆಗೆ ಬೆಚ್ಚಿಬಿದ್ದ ಶಾಲಾ ಆಡಳಿತ ಮಂಡಳಿ ಆತನನ್ನು ಅಮಾನತು ಮಾಡಿ, ಶಿಕ್ಷಕರ ಜತೆ ಸಭೆ ನಡೆಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.

ಬಾಲಕನ ಮೇಲೆ ಪ್ರಕರಣ ದಾಖಲಾಗಿದ್ದು, ಬಾಲ ನ್ಯಾಯ ಮಂಡಳಿ ಮುಂದೆ ಹಾಜರು ಪಡಿಸಲಾಗಿದೆ. ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಶಿವಸಾಗರ್ ಪೊಲೀಸ್ ಠಾಣಾಧಿಕಾರಿ ಪ್ರಂಜಿತ್ ಲಖರ್ ತಿಳಿಸಿದ್ದಾರೆ.

Comments are closed.