ಕರ್ನಾಟಕ

ನಾನು ಶಾಸಕನಾದರೆ ಮಾತ್ರ ಭದ್ರಾ ಜಲಾಶಯ ತುಂಬುತ್ತದೆ

Pinterest LinkedIn Tumblr


ಶಿವಮೊಗ್ಗ: ನಾನು ಅದೃಷ್ಟದ ಶಾಸಕ. ನಾನು ಶಾಸಕನಿದ್ದಾಗಲೆಲ್ಲ ಭದ್ರಾ ಜಲಾಶಯ ತುಂಬಿದೆ. ಸೋತಾಗ ತುಂಬಿಲ್ಲ ಎಂದು ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್​ ಹೇಳಿದರು.

ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿ ಮಾತನಾಡಿ, ನಾನು ಈ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಭದ್ರಾ ಜಲಾಶಯ ಅವಧಿಗೂ ಮೊದಲು ಭರ್ತಿಯಾಗಿದೆ ಎಂದಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಗೆದ್ದಿರುವ ಏಕೈಕ ಕಾಂಗ್ರೆಸ್​ ಶಾಸಕ ನಾನು. ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿಗುವ ಭರವಸೆ ಇದೆ. ನನಗೆ ಸಚಿವ ಸ್ಥಾನ ನೀಡಲು ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ. ಬೋರ್ಡ್​ ಅಧ್ಯಕ್ಷ ಸ್ಥಾನ ನೀಡಿದರೆ ನಾನು ನಿರಾಕರಿಸುತ್ತೇನೆ ಎಂದು ಹೇಳಿದರು.
ಬಾಗಿನ ಅರ್ಪಣೆ ವೇಳೆ ಸಂಗಮೇಶ್ವರ್​ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಟ್ರಾಫಿಕ್​ ಜಾಮ್​ ಆಗಿ ಜನರ ನೂಕು ನುಗ್ಗಲು ಆಗಿತ್ತು.

Comments are closed.