ಕರ್ನಾಟಕ

ನಾಪತ್ತೆಯಾಗಿದ್ದ ಟೆಕ್ಕಿ 8 ತಿಂಗಳ ಬಳಿಕ ಪತ್ತೆ!

Pinterest LinkedIn Tumblr


ಬೆಂಗಳೂರು: ಕಳೆದ 8 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಬಿಹಾರ ಮೂಲದ ಟೆಕ್ಕಿ ಕಡೆಗೂ ಪತ್ತೆಯಾಗಿದ್ದಾನೆ ಎಂದು ಸಿಐಡಿ ಪೊಲೀಸರು ತಿಳಿಸಿದ್ದಾರೆ.

ಕುಮಾರ್​ ಅಜಿತಾಭ್​​( 30) ನಾಪತ್ತೆಯಾಗಿದ್ದ ಟೆಕ್ಕಿ. ಬೆಳ್ಳಂದೂರಿನ ಬ್ರಿಟಿಷ್​ ಟೆಲಿಕಾಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈತ ಕಳೆದ ಡಿಸೆಂಬರ್​ನಲ್ಲಿ ನಾಪತ್ತೆಯಾಗಿದ್ದ.

ಈ ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದ ಸಿಐಡಿಗೆ ಅಜಿತಾಬ್​ ಸಿಕ್ಕಿದ್ದು, ಈತ ಧಾರ್ಮಿಕ ಆರಾಧಕನಾಗಿದ್ದಾನೆ ಎಂದು ಸಿಐಡಿ ತಿಳಿಸಿದೆ. ಈತನಿಗಾಗಿ ಹತ್ತಾರು ಊರು, ಆಶ್ರಮಗಳನ್ನು ಸುತ್ತಿದ್ದ ಸಿಐಡಿ ತಂಡಕ್ಕೆ ಆತ ಸಿಕ್ಕಿದ್ದು, ಆತನ ನಡುವಳಿಕೆಯಲ್ಲಿ ಸಾಕಷ್ಟು ಬದಲಾವಣೆ ಕಂಡು ಬಂದಿದೆ ಎಂದು ತಿಳಿಸಿದೆ.

ಅಜಿತಾಭ್​ ವೇಶ ಮಾತು ಬದಲಾಗಿದ್ದು, ಆತನ ವಿಚಾರಣೆ ನಡೆಸುತ್ತಿರುವುದಾಗಿದೆ ಸಿಐಡಿ ಹೈಕೋರ್ಟ್​ಗೂ ವರದಿ ನೀಡಿದೆ.

ಏನಿ ಪ್ರಕರಣ?

ಅಜಿತಾಭ್​​ ತನ್ನ ಸಿಯಾಜ್​ ಕಾರನ್ನು ಒಎಲ್​ಎಕ್ಸ್​ನಲ್ಲಿ ಮಾರಾಟ ಮಾಡಲು ಯತ್ನಿಸಿದ್ದ. ಈ ಪ್ರಕಟಣೆಯನ್ನು ನೋಡಿ ಆತನಿಗೆ ಕರೆ ಬರುತ್ತಿತ್ತು. ಈ ಸಂಬಂಧ ಕಾರು ತೋರಿಸಲು ಯಾವಾಗಲೂ ಹೊರಗೆ ಹೋಗುತ್ತಿದ್ದ. ಹೀಗೆ ಒಬ್ಬ ವ್ಯಕ್ತಿ ಕರೆ ಮಾಡಿದ್ದ ಎಂದು ಕಳೆದ ಡಿ. 18, 2017ರಂದು ತನ್ನ ಕಾರು ತೆಗೆದುಕೊಂಡು ಹೋದವರು ಮರಳಿರಲಿಲ್ಲ.

ಒಎಲ್​ಎಕ್ಸ್​ ಜಾಹೀರಾತು ನೋಡಿ ಯಾರದರೂ ಅವರನ್ನು ಅಪಹರಿಸುವ ಶಂಕೆ ಇದೆ ಎಂದು ಆತನ ಕುಟುಂಬ ವೈಟ್​ಫೀಲ್ಡ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಂಟು ತಿಂಗಳಾದರೂ ಟೆಕ್ಕಿ ಪ್ರಕರಣವನ್ನು ಭೇದಿಸದ ಹಿನ್ನಲೆಯಲ್ಲಿ ಅಜಿತಾಬ್​ ಸಹೋದರಿ ಪ್ರಜ್ಞಾ ಜು.8ರಂದು ಟೌನ್​ ಹಾಲ್​ ಎದುರು ಪ್ರತಿಭಟನೆ ನಡೆಸಿದ್ದರು. ಈ ಕುರಿತು ಟ್ವೀಟರ್​ನಲ್ಲಿಯೂ ಸಮರ ನಡೆಸಿದ್ದ ಪ್ರಜ್ಞಾ ಪೊಲೀಸರ ತನಿಖೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

ಪೋಲಿಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಆತ ಎಲ್ಲಿದ್ದಾನೆಂದು ತಿಳಿದು ಬಂದಿಲ್ಲ. ಆತನಿಗೆ ಮದುವೆ ನಿಶ್ಚಯವಾಗಿತ್ತು. ಅವನು ಜೀವಂತವಾಗಿದ್ದಾನೆಂದು ನಾನು ಭರವಸೆ ಹೊಂದಿದ್ದೇವೆ. ಆತ ಎಲ್ಲಿದ್ದಾನೆ ಎಂದು ತಿಳಿಯ ಬೇಕಾದರೆ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು.

ಪ್ರಕರಣವನ್ನು ಸರ್ಕಾರ ಸಿಡಿಐಗೆ ವರ್ಗಾವಣೆ ಮಾಡಿತು. ಅಜಿತಾಬ್​ ಕಣ್ಮರೆ ಪ್ರಕರಣ ಕುರಿತು ಪ್ರತಿ 15ದಿನಕ್ಕೆ ಒಮ್ಮೆ ವರದಿ ಸಲ್ಲಿಸುವಂತೆ ಹೈ ಕೋರ್ಟ್ ನಿರ್ದೇಶನ ನೀಡಿತ್ತು. ಈಗ ಟೆಕ್ಕಿ ಪತ್ತೆಯಾಗಿದ್ದು ಈ ಕುರಿತು ಮುಚ್ಚಿದ ಲಕೋಟೆಯಲ್ಲಿ ಹೈ ಕೋರ್ಟ್​ಗೆ ಸಿಐಡಿ ಪೊಲೀಸರು ಮಾಹಿತಿ ನೀಡಿದ್ದಾರೆ.

Comments are closed.