ಕರ್ನಾಟಕ

ಪಾಕ್ ಧ್ವಜ ಹಾರಾಟ ಪ್ರಕರಣ: ಗೌರಿ ಲಂಕೇಶ್ ಹತ್ಯೆಯ ಆರೋಪಿ ವಾಗ್ಮೋರೆ ಖುಲಾಸೆ

Pinterest LinkedIn Tumblr


ವಿಜಯಪುರ: ಜಿಲ್ಲೆಯ ಸಿಂಧಗಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಪಾಕ್ ಧ್ವಜ ಹಾರಿಸಿದ ಪ್ರಕರಣದಲ್ಲಿ ಪರಶುರಾಮ ವಾಗ್ಮೋರೆ ಸೇರಿದಂತೆ ಆರು ಆರೋಪಿಗಳು ಖುಲಾಸೆಗೊಂಡಿದ್ದಾರೆ.

2012ರ ಜನವರಿ 1 ರಂದು ಸಿಂಧಗಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಲಾಗಿತ್ತು. ಈ ಪ್ರಕರಣದಲ್ಲಿ ಗೌರಿ ಲಂಕೇಶ್ ಹತ್ಯೆಯ ಪ್ರಮುಖ ಆರೋಪಿ ಪರಶುರಾಮ ಆರೋಪಿ ಸೇರಿ ಒಟ್ಟು 7 ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಬರೋಬ್ಬರಿ 6 ವರ್ಷಗಳ ಸುದೀರ್ಘ ವಿಚಾರಣೆ ನಂತರ ಇಂದು ಪರಶುರಾಮ ವಾಗ್ಮೋರೆ ಸೇರಿದಂತೆ 6 ಆರೋಪಿಗಳಿಗೆ ವಿಜಯಪುರದ 1ನೇ ಹೆಚ್ಚುವರಿ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ.

ತಾಂತ್ರಿಕ ದೋಷದಿಂದ ಆರೋಪ ಸಾಬೀತು ಮಾಡಲು ಸಾಧ್ಯವಾಗದೆ ಕೇಸ್ ಖುಲಾಸೆ ಆಗಿದೆ. ಅಲ್ಲದೇ ಪ್ರಕರಣದ ಮತ್ತೋರ್ವ ಆರೋಪಿ ಅಪ್ರಾಪ್ತ ಆಗಿದ್ದಾನೆ ಎಂದು ವಕೀಲರಾದ ಲಗಳಿ ಮಾಧ್ಯಮಗಳಿಗೆ ಸ್ಪಷ್ಟ ಪಡಿಸಿದರು.

ಗೌರಿ ಹತ್ಯೆ ಪ್ರಕರಣದ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ವಾಗ್ಮೋರೆ ಮೌನ ವಹಿಸಿದ್ದ, ಅಲ್ಲದೇ ಮಾಧ್ಯಮಗಳ ಕ್ಯಾಮೆರಾ ಕಂಡು ಮುಖ ಮುಚ್ಚಿಕೊಳ್ಳಲು ಯತ್ನಿಸಿದ್ದ. ವಿಷಯ ಎಲ್ಲರಿಗೂ ಗೊತ್ತಿರೋದೆ ಎಂದಾಗ ಕ್ಯಾಮೆರಾಗಳಿಗೆ ಮುಖ ದರ್ಶನ ಮಾಡಿದ್ದಾನೆ. ಅಲ್ಲದೇ ಸಾಕು ಹೋಗ್ರಿ ಎಂದು ಕ್ಯಾಮೆರಾ ಮೇನ್ ಗಳಿಗೆ ವಾಗ್ಮೋರೆ ಆವಾಜ್ ಹಾಕಿದ್ದಾನೆ.

ತಾಯಿ ಜಾನಕಿಬಾಯಿಯವರು ಚಿತ್ರಿಕರಣಕ್ಕೆ ಅಡ್ಡಿ ಪಡೆಸಿದ್ದಲ್ಲದೇ, ಕಲ್ಲು ತೆಗೆದುಕೊಂಡು ಕ್ಯಾಮೆರಾಗೆ ಹೊಡೆಯೋಕೆ ಮುಂದಾಗಿದ್ದರು. ವಿನಾಕಾರಣ ಮಗನ ವಿಡಿಯೋ ಮಾಡಬೇಡಿ, ಅವನಿಗೆ ಟೆನ್ಷನ್ ಕೊಡಬೇಡಿ ಎಂದು ಮನವಿ ಮಾಡಿಕೊಂಡರು.

Comments are closed.