ಕರ್ನಾಟಕ

ನಾನೇ ಅಲ್ಲ, ನನ್ನ ಡೆಡ್ ಬಾಡಿಯೂ ಬಿಜೆಪಿಗೆ ಸೇರಲ್ಲ ಎಂದ ಹೆಚ್‍ಸಿ ಮಹದೇವಪ್ಪ

Pinterest LinkedIn Tumblr

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಾಗಿರುವ ಹೆಚ್ ಸಿ ಮಹದೇವಪ್ಪ ಅವರು ಬಿಜೆಪಿ ಸೇರುತ್ತಾರೆ ಎಂಬ ವದಂತಿಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಮಹದೇವಪ್ಪ ಅವರು ನಾನೇ ಅಲ್ಲ, ನನ್ನ ಡೆಡ್ ಬಾಡಿಯೂ ಬಿಜೆಪಿಗೆ ಸೇರಲ್ಲ ಎಂದು ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಹದೇವಪ್ಪ ಅವರು ನಾನು 12 ವರ್ಷಗಳ ಹಿಂದೆಯೇ ಹೇಳಿದ್ದೆ, ನನ್ನ ಡೆಡ್ ಬಾಡಿಯೂ ಬಿಜೆಪಿಗೆ ಹೋಗುವುದಿಲ್ಲ ಎಂದು ಈಗಲೂ ಅದನ್ನೇ ಹೇಳುತ್ತೇನೆ ಎಂದು ಹೇಳಿದರು.

ಇಲ್ಲಿ ಸೋತು ಅಲ್ಲಿಗೆ ಹೋಗುವುದು, ಅಲ್ಲಿ ಸೋತಾಗ ಇಲ್ಲಿಗೆ ಬರುವವನು ನಾನಲ್ಲ. ನಾನು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧನಾಗಿರುವವನು ಎಂದು ಮಹದೇವಪ್ಪ ಹೇಳಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಹದೇವಪ್ಪ ಅವರು ಟಿ.ನರಸೀಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಅಶ್ವಿನ್ ಕುಮಾರ್ ಎದುರು ಹೀನಾಯ ಸೋಲು ಕಂಡಿದ್ದರು.

Comments are closed.