ಕರ್ನಾಟಕ

ಪ್ರೀತಿಸಿ ಕೈಕೊಟ್ಟ 17ರ ಬಾಲಕ: ಆತ್ಮಹತ್ಯೆ ಮಾಡಿಕೊಂಡ 19ರ ಯುವತಿ!

Pinterest LinkedIn Tumblr


ಬೆಂಗಳೂರು: ತನಗಿಂತ ಚಿಕ್ಕ ವಯಸ್ಸಿನ ಅಪ್ರಾಪ್ತನನ್ನು ಪ್ರೀತಿಸಿ, ಆತ ಮೋಸ ಮಾಡಿದ ಎಂಬ ಕಾರಣಕ್ಕೆ ಬೇಸರಗೊಂಡ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಶವಂತ ಪುರ
ಸುಬೇದಾರ್‌ ಪಾಳ್ಯದ ತ್ರೀವೇಣಿ ರಸ್ತೆಯಲ್ಲಿ ಮಂಗಳವಾರ ನಡೆದಿದೆ.

ಸುಬೇದಾರ್‌ ಪಾಳ್ಯ ನಿವಾಸಿ ಅಮೃತಾ (19) (ಹೆಸರು ಬದಲಿಸಲಾಗಿದೆ) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈ ಸಂಬಂಧ 17 ವರ್ಷದ ಬಾಲಕನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಬಾಲಕ ಮತ್ತು ಅಮೃತಾ ಕಳೆದೊಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಇದರಿಂದ ಬೇಸತ್ತ ಅಮೃತಾ, ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮನೆ ಮಹ ಡಿಗೆ ಹೋಗಿ ವಿಷ
ಸೇವಿಸಿದ್ದಾಳೆ. ಮಹಡಿ ಮೇಲೆ ಅರೆಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿದ್ದ ಪುತ್ರಿಯನ್ನು ಪೋಷಕರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫ‌ಲಿಸದೆ ಬುಧವಾರ ಬೆಳಗ್ಗೆ 5 ಗಂಟೆಗೆ ಅಮೃತಾ ಮೃತಪಟ್ಟಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಗರದ ಹೊರವಲಯದ ನೆಲಗೆದರನ ಹಳ್ಳಿ ಮೂಲದ ಬಾಲಕ, ಮೊದಲ ವರ್ಷದ ಡಿಪ್ಲೊಮಾ ಓದುತ್ತಿದ್ದಾನೆ. ಒಂದು ವರ್ಷದ ಹಿಂದೆ ಆತನಿಗೆ ಅಮೃತಾಳ ಪರಿಚಯ ವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿತ್ತು. ಈ ವಿಚಾರ ಗೊತ್ತಾದ ಇಬ್ಬರ ಪೋಷಕರೂ ಮಕ್ಕಳನ್ನು ಕರೆಸಿ ವಿದ್ಯಾಭ್ಯಾಸ ಮುಗಿದ ಬಳಿಕ ಮದುವೆ ಮಾಡಿಸುವುದಾಗಿ ಹೇಳಿದ್ದರು.

ಕಳೆದ ಶನಿವಾರ ಅಮೃತಾಳನ್ನು ತನ್ನ ಸಹೋದರಿ ಮನೆಗೆ ಕರೆದೊಯ್ದಿದ್ದ ಬಾಲಕ, ಆಕೆಯ ಮೈ-ಕೈ ಮುಟ್ಟಿದ್ದ. ಇದನ್ನು ವಿರೋಧಿಸಿದ ಅಮೃತಾ ತಕ್ಷಣ ಮನೆಗೆ ವಾಪಸಾಗಿದ್ದಳು. ಮಾರನೇ ದಿನ ಅಮೃತಾ, ಬಾಲಕನಿಗೆ ಕರೆ ಮಾಡಿದಾಗ ಆತ ಪ್ರತಿಕ್ರಿಯಿಸದ ಕಾರಣ ಆಕೆ ಬೇಸರಗೊಂಡಿದ್ದಳು ಎನ್ನಲಾಗಿದೆ.

ಈ ನಡುವೆ ಮಂಗಳವಾರ ಬೆಳಗ್ಗೆ ಅಮೃತಾಗೆ ಕರೆ ಮಾಡಿದ ಬಾಲಕ, “ನೀನು ನನಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ನಾನು ಹೇಳಿದಂತೆ ಕೇಳುತ್ತಿಲ್ಲ. ನಿನ್ನನ್ನು ಮದುವೆ ಯಾಗಲು ಸಾಧ್ಯವಿಲ್ಲ. ನೀನು ನನ್ನೊಂದಿಗೆ ಮಾತನಾಡಬೇಡ. ನಾನು ಬೇರೆ ಯುವತಿ ಜತೆ ವಿವಾಹವಾಗುತ್ತೇನೆ’ ಎಂದು ಹೇಳಿದ್ದಲ್ಲದೆ, ಅವಾಚ್ಯವಾಗಿ ನಿಂದಿಸಿದ್ದಾನೆ. ಇದ ರಿಂದ ಮನನೊಂದ ಅಮೃತಾ ಗಿಡಕ್ಕೆ ಸಿಂಪಡಿ ಸುವ ಔಷಧ ಕುಡಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ. ಅಮೃತಾ ಪೋಷಕರು ನೀಡಿದ ದೂರು ಆಧರಿಸಿ ಬಾಲಕನನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಹಲ್ಲೆಗೆ ಯತ್ನ: ಪ್ರಕರಣ ಸಂಬಂಧ ಬಾಲಕ ನನ್ನು ಠಾಣೆಗೆ ಕರೆತರುವ ವೇಳೆ ಪೊಲೀಸ್‌ ಠಾಣೆ ಎದುರು ಜಮಾಯಿಸಿದ್ದ ಅಮೃತಾ ಸಂಬಂಧಿಕರು ಆತನ ಮೇಲೆ ಹಲ್ಲೆಗೆ ಮುಂದಾದರು. ಮತ್ತೂಂದೆಡೆ ಬಾಲಕನ ಪೋಷಕರು ಮತ್ತು ಸಂಬಂಧಿಕರು ಕೂಡ ಸೇರಿದರು. ಪೊಲೀಸರು ಎರಡೂ ಕಡೆಯವರನ್ನು ಸಮಾಧಾನಪಡಿಸಿ ವಾತಾವರಣ ತಿಳಿಗೊಳಿಸಿದರು.

Comments are closed.