ಕರ್ನಾಟಕ

ಬಿಜೆಪಿ ಕೋಮುವಾದಿ, ಜೆಡಿಎಸ್‌ ಅವಕಾಶವಾದಿ: ಸಿದ್ದರಾಮಯ್ಯ

Pinterest LinkedIn Tumblr


ವಿಜಯಪುರ: ಬಿಜೆಪಿ ಕೋಮುವಾದಿ ಪಕ್ಷ , ಜೆಡಿಎಸ್ ಅವಕಾಶವಾದಿ ಪಕ್ಷ. ಕಾಂಗ್ರೆಸ್ ಸಾಮಾಜಿಕ ನ್ಯಾಯಪರ, ಅಭಿವೃದ್ಧಿ ಪರ ಪಕ್ಷವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಇಂಡಿಯಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಅವರು, ಇಂಡಿ ಕ್ಷೇತ್ರದಲ್ಲಿ ಹಿಂದೆಂದೂ ಆಗದ ಅಭಿವೃದ್ಧಿಯಾಗಿದೆ. ಇಂಡಿ ಪಟ್ಟಣದ ಚಿತ್ರಣ ಬದಲಾಗಿದೆ. ಇಂಥ ಶಾಸಕರನ್ನು ಆರಿಸಿ ಎಂದು ಮನವಿ ಮಾಡಿದರು.

‘ಜೆಡಿಎಸ್-ಬಿಜೆಪಿ ಒಳ ಒಪ್ಪಂದ ಅಗಿದೆ. ಜೆಡಿಎಸ್‌ನವರು ಮನೆ ಮುರುಕರು. ಹನೂರು, ಇಂಡಿ, ಪಿರಿಯಾಪಟ್ಟಣದಲ್ಲಿ ಕಾಂಗ್ರೆಸ್ ವೋಟ್ ಒಡೆಯಲು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ ಹೊರತು ಗೆಲ್ಲಲು ಅಲ್ಲ’ ಎಂದು ಸಿಎಂ ಆರೋಪಿಸಿದರು.

ಸಿದ್ದರಾಮಯ್ಯಗೆ ಬೃಹತ್‌ ನಿಂಬೆ ಹಾರದ ಸನ್ಮಾನ

ನಾವು ಧರ್ಮ ಒಡೆಯುವ ರಾಜಕಾರಣ ಮಾಡಿಲ್ಲ. ಬಿಜೆಪಿಯವರದ್ದು ಬಾಯಿನಲ್ಲಿ ಒಂದು, ನಡೆದುಕೊಳ್ಳುವುದು ಒಂದು. ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎನ್ನುವ ಬಿಜೆಪಿಗೆ ಅಲ್ಪಸಂಖ್ಯಾತರು ಬೇಡವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಸಮ ಸಮಾಜ ಸಂದೇಶ ಸಾರಿದ ಬಸವಣ್ಣನ ಮೇಲೆ ಕಾಂಗ್ರೆಸ್ ನಂಬಿಕೆ ಇಟ್ಟುಕೊಂಡು ಕೆಲಸ ಮಾಡಿದೆ. ನಮ್ಮ ಕಾರ್ಯಕ್ರಮಗಳು ಒಂದು ಜಾತಿಯನ್ನಾಧರಿಸಿ ಮಾಡಿದ್ದಲ್ಲ ಎಂದ ಸಿದ್ದರಾಮಯ್ಯ, ತಮ್ಮ ಹಲವು ಭಾಗ್ಯದ ಯೋಜನೆಗಳನ್ನು ಹೆಸರುಗಳನ್ನು ಪಟ್ಟಿ ಮಾಡಿದರು.

ಯಡಿಯೂರಪ್ಪ ಏನು ಹೇಳಲು ಸಾಧ್ಯ, ಜೈಲಿಗೆ ಹೋಗಿದ್ದನ್ನು ಅವರು ಹೇಗೆ ಹೇಳುತ್ತಾರೆ? ಸೂರ್ಯಚಂದ್ರ ಹುಟ್ಟುವಷ್ಟೇ ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಿಎಂ ಹೇಳಿಕೊಂಡರು.

ಸಚಿವ ಎಂ.ಬಿ.ಪಾಟೀಲ, ಶಾಸಕರಾದ ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಸಿ.ಎಂ ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.

Comments are closed.