ಕರ್ನಾಟಕ

ಬನ್ನೇರುಘಟ್ಟದಲ್ಲಿ ಆನೆಗಳ ದಾಂಧಲೆ: ಅಂಗಡಿಗಳ ಧ್ವಂಸ

Pinterest LinkedIn Tumblr


ಬನ್ನೇರುಘಟ್ಟ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಾಕಾನೆಗಳು ಪಾರ್ಕ್‌ ಆವರಣದಲ್ಲಿರುವ ಅಂಗಡಿಗಳನ್ನು ಧ್ವಂಸ ಮಾಡಿವೆ.

ಉದ್ಯಾನವನದ ಮುಖ್ಯದ್ವಾರದ ಬಳಿ ಕಬ್ಬಿನ ಜ್ಯೂಸ್‌ ಅಂಗಡಿ, ಪಾಪ್‌ ಕಾರ್ನ್, ತಿಂಡಿ ಮತ್ತಿತರ ವಸ್ತುಗಳನ್ನು ಇಟ್ಟುಮಾರಾಟ ಮಾಡುವ ಗೂಡಂಗಡಿಗಳಿವೆ. ತಡ ರಾತ್ರಿ ಬಂದ ಆರು ಸಾಕಾನೆಗಳು ಈ ಅಂಗಡಿಗಳನ್ನು ಧ್ವಂಸ ಮಾಡಿವೆ. ಭದ್ರತೆ ನಡುವೆಯೂ ಹಾನಿಯಾಗಿರುವುದಕ್ಕೆ ಅಂಗಡಿ ಮಾಲೀಕರಿಂದ ಆಕ್ರೋಶ ವ್ಯಕ್ತವಾಗಿದೆ.

”ಒಂದು ತಿಂಗಳು ಬಾಡಿಗೆ ನೀಡಲಿಲ್ಲವೆಂದರೆ ನೋಟಿಸ್‌ ನೀಡಿ ಖಾಲಿ ಮಾಡಿಸುತ್ತಾರೆ. ಆದರೆ ಈ ನಷ್ಟಕ್ಕೆ ಯಾರು ಹೊಣೆ,” ಎಂದು ಮಳಿಗೆ ಮಾಲೀಕರು ಪ್ರಶ್ನಿಸಿದ್ದಾರೆ. ”ಸಾವಿರಾರು ರೂಪಾಯಿ ಸಾಲ ಮಾಡಿ ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದೆವು. ಅಂಗಡಿಯಲ್ಲಿದ್ದ ಸಾಮಗ್ರಿ ಎಲ್ಲ ನಾಶವಾಗಿದೆ,” ಎಂದು ಅಂಗಡಿ ಮಾಲೀಕರು ತಮ್ಮ ಅಳಲು ತೋಡಿಕೊಂಡಿದ್ದು , ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

Comments are closed.