ಹಾಸನ : ನೀತಿ ಸಂಹಿತೆ ಉಲ್ಲಂಘನೆಯಡಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೋಟಿಸ್ ಜಾರಿ ಮಾಡಿದ್ದರ ವಿರುದ್ಧ ಉಸ್ತುವಾರಿ ಸಚಿವ ಎ.ಮಂಜು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಮುಂದಿನ ಸರ್ಕಾರ ಬರುವವರೆಗೂ ನಾನೇ ಮಂತ್ರಿ. ಇಲಾಖೆ ಕಡತ ನೋಡಲು ಈಗಲೂ ಅಧಿಕಾರವಿದೆ. ನನಗೆ ಇನ್ನೂ ನೋಟಿಸ್ ಸಿಕ್ಕಿಲ್ಲ. ಇದೆಲ್ಲ ಉದ್ದೇಶಪೂರ್ವಕವಾಗಿಯೇ ಮಾಡುತ್ತಾರೆ ಎಂಬುದು ತಿಳಿದಿದೆ ಎಂದು ಹೇಳಿದ್ದಾರೆ.
ಡಿಸಿ, ಎಡಿಸಿ, ಸಿಇಒ ಇವರೆಲ್ಲ ನನ್ನ ಕೈಕೆಳಗೆ ಕೆಲಸ ಮಾಡುವ ಅಧಿಕಾರಿಗಳು. ನಾನು ವಿದ್ಯಾವಂತ. ಏನು ಮಾಡಬೇಕು. ಮಾಡಬಾರದು ಎಂಬುದು ತಿಳಿದಿದೆ. ನೋಟಿಸ್ ಸಿಕ್ಕ ಬಳಿಕ ಅದರಲ್ಲಿ ಏನಿದೆ ಎಂದು ನೋಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೇಲೆ ಮೂವರು ಯುವತಿಯರು ಸಚಿವರ ಕಚೇರಿಯಲ್ಲಿ ಬೀಗ ಹಾಕಿಕೊಂಡು ಕೆಲಸ ಮಾಡುತ್ತಿದ್ದರು. ಅಧಿಕಾರಿಗಳು ಎಷ್ಟೇ ಬಾಗಿಲು ತೆಗೆಸಲು ಯತ್ನಿಸಿದರೂ ತೆಗೆದಿರಲಿಲ್ಲ. ಈ ನಿಮಿತ್ತ ಜಿಲ್ಲಾಧಿಕಾರಿ ನೋಟಿಸ್ ಜಾರಿ ಮಾಡಿದ್ದರು.
Comments are closed.