ಕರ್ನಾಟಕ

ಸಿಎಂ ತಮ್ಮ ಹೆಸರನ್ನು ಸಿದ್ದ ’ರಾವಣ’ಯ್ಯ ಎಂದು ಬದಲಾಯಿಸಿಕೊಳ್ಳಲಿ : ಪ್ರತಾಪ್ ಸಿಂಹ

Pinterest LinkedIn Tumblr


ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ರಾಮನ ಗುಣಗಳು ಇಲ್ಲ. ರಾವಣನ ಗುಣಗಳು ಜಾಸ್ತಿ ಅಡಗಿ ಕುಳಿತಿವೆ. ಹಾಗಾಗಿ ಸಿಎಂ ತಮ್ಮಹೆಸರನ್ನು ಸಿದ್ದ’ರಾವಣ’ಯ್ಯ ಎಂದು ಬದಲಿಸಿ ಇಟ್ಟುಕೊಳ್ಳಲಿ ಎಂದು ಪ್ರತಾಪ ಸಿಂಹ ಲೇವಡಿ ಮಾಡಿದರು.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರು ಮಹಾರಾಜರು ಬಿಟ್ಟರೆ ನಾನೇ ಹೆಚ್ಚು ಅನುದಾನವನ್ನು ಮೈಸೂರಿನ ಅಭಿವೃದ್ಧಿಗೆ ನೀಡಿದ್ದು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂರಿನಲ್ಲಿ ಹೇಳಿದ್ದಾರೆ. ಮೈಸೂರು ಮಹಾರಾಜರು ಅಭಿವೃದ್ಧಿ ಮಾಡಿದ ರೀತಿ ಮೈಸೂರನ್ನು ಯಾರು ಮಾಡಲು ಸಾಧ್ಯವಿಲ್ಲ. ಮಹಾರಾಜರ ಕೊಡುಗೆ ಬಗ್ಗೆ ಯಾರು ಮಾತನಾಡಲು ಸಾಧ್ಯವಿಲ್ಲ, ಅವರಿಗೆ ಅವರೇ ಸಾಟಿ, ದೇಶದ ಯಾವ ರಾಜ ಮನೆತನವೂ ಮೈಸೂರು ರಾಜ ಸರಿಸಾಟಿ ಇಲ್ಲ. ಇವತ್ತು ಬೆಂಗಳೂರಿಗರು ನೀರು ಕುಡಿಯುತ್ತಿರೋದು ಮೈಸೂರಿನ ಮಹಾರಾಜರಿಂದ ಎನ್ನುವುದನ್ನು ಅರಿಯಬೇಕು ಎಂದು ಟಾಂಗ್ ಕೊಟ್ಟರು.

Comments are closed.