ಕರ್ನಾಟಕ

ರಾಜ್ಯಸಭಾ ಚುನಾವಣೆಗೆ ಬಿಜೆಪಿಯಿಂದ ರುದ್ರೇಗೌಡರಿಗೆ ಟಿಕೆಟ್?

Pinterest LinkedIn Tumblr


ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಕಳೆದ ಕೆಲವು ದಿನಗಳಿಂದ ಪೈಪೋಟಿಯಲ್ಲಿದ್ದ ರಾಜೀವ್ ಚಂದ್ರಶೇಖರ್ ಹಾಗೂ ವಿಜಯ ಸಂಕೇಶ್ವರ್ ಹೆಸರು ಕೊನೆಗಳಿಗೆಯಲ್ಲಿ ಬದಲಾವಣೆಯಾಗುವ ಎಲ್ಲಾ ಲಕ್ಷಣಗಳು ಕಾಣುತಿದ್ದು ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಇವರಿಬ್ಬರ ನಡುವೆ ಪಕ್ಷದ ವರಿಷ್ಠರು ಎಸ್.ರುದ್ರೇಗೌಡರಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಶಿವಮೊಗ್ಗ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಎಸ್. ರುದ್ರೇಗೌಡ ಅವರನ್ನು ರಾಜ್ಯಸಭಾ ಚುನಾವಣೆಗೆ ಟಿಕೆಟ್ ನೀಡಲು ಎಲ್ಲಾ ಸಿದ್ಧತೆ ನಡೆದಿದ್ದು ಅಧಿಕೃತ ಘೋಷಣೆ ಬಾಕಿಯಿದೆ.

ಪಕ್ಷ ಸಂಘಟೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅತ್ಯಂತ ತಳಮಟ್ಟದಿಂದ ಪಕ್ಷ ಸಂಘಟನೆಯ ಅನುಭವವನ್ನು ಹೊಂದಿದವರು ಎಸ್. ರುದ್ರೇಗೌಡರು. ಯಡಿಯೂರಪ್ಪರ ಆಪ್ತರು ಆಗಿದ್ದವರು.

-ಉದಯವಾಣಿ

Comments are closed.