ಬೆಂಗಳೂರು: ಕಳೆದ ತಿಂಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿ ಸೈಕೋಶಂಕರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ವಾರಗಳಲ್ಲಿ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೋಟಿಸ್ ನೀಡಿದೆ.
10 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದ ಎಂ ಜೈಶಂಕರ್(38) ಎಂಬಾತ ಫೆ. 27ರಂದು ಪರಪ್ಪನ ಅಗ್ರಹಾರ ಕಾರಾಗೃಹದೊಳಗೆ ಶೇವಿಂಗ್ ಬ್ಲೇಡ್ ಬಳಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಕುರಿತು ಆರು ವಾರಗಳಲ್ಲಿ ಎನ್ಎಚ್ಆರ್ಸಿಗೆ ವರದಿ ಸಲ್ಲಿಸುವಂತೆ ಕಾರಾಗೃಹ ಇನ್ಸಪೆಕ್ಟರ್ ಜನರಲ್ಗೆ ನೋಟಿಸ್ ನೀಡಿದೆ.
ಎಎಚ್ಆರ್ಸಿ ಪ್ರಕಾರ, ಘಟನೆ ನಡೆದು 24 ಗಂಟೆಗಳು ಕಳೆದರೂ ಮಾರ್ಗದರ್ಶಿ ಅನ್ವಯ ಮಾಹಿತಿ ನೀಡಿಲ್ಲ. ಜೈಶಂಕರ್ ಮೇಲೆ ಸುಮಾರು 15ಕ್ಕೂ ಅಧಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಿದ್ದವು. ಅವುಗಳಲ್ಲಿ ಮೂರು ಪ್ರಕರಣಗಳಲ್ಲಿ ಆತ ಅಪರಾಧಿಯಾಗಿದ್ದ. ಜೈಲು ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಘಟನೆಗೆ ಕಾರಣ ಎಂದು ಹೇಳಿದೆ.
Comments are closed.