ಕರ್ನಾಟಕ

ಪುಟ್ಟಣ್ಣಯ್ಯ ಉತ್ತರಾಧಿಕಾರಿ ದರ್ಶನ್‌: ಮುರುಘಾ ಶ್ರೀ

Pinterest LinkedIn Tumblr


ಮಂಡ್ಯ: ರೈತನಾಯಕ ಪುಟ್ಟಣ್ಣಯ್ಯ ಅವರದ್ದು ದಿಟ್ಟ ನಾಯಕತ್ವ. ತಂದೆಯ ಹಾದಿಯಲ್ಲೇ ಪುತ್ರ ದರ್ಶನ್‌ ಮುನ್ನಡೆಯುವುದರೊಂದಿಗೆ ಮುಂದಿನ ಉತ್ತರಾಧಿಕಾರಿಯಾಗಬೇಕು ಎಂದು ಚಿತ್ರದುರ್ಗದ ಮುರು ಘಾಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಒಲವು ವ್ಯಕ್ತಪಡಿಸಿದರು.

ಇಲ್ಲಿನ ಪಾಂಡವ ಕ್ರೀಡಾಂಗಣದಲ್ಲಿ ರಾಜ್ಯ ರೈತಸಂಘ, ಹಸಿರು ಸೇನೆ ವತಿಯಿಂದ ಆಯೋಜಿಸಿದ್ದ ಹಸಿರು ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪುಟ್ಟಣ್ಣಯ್ಯನವರಿಂದ ಖಾಲಿಯಾದ ಜಾಗಕ್ಕೆ ಪುತ್ರ ಮತ್ತು ಪತ್ನಿ ಇದ್ದಾರೆ. ಅಭಿಮಾನಿಗಳು ದರ್ಶನ್‌ ಪರವಾಗಿ ಹೆಚ್ಚಿನ ಒಲವು ತೋರುತ್ತಿದ್ದಾರೆ. ಜೂನಿಯರ್‌ ಪುಟ್ಟಣ್ಣಯ್ಯನನ್ನು ನಾವೆಲ್ಲರೂ ಸೇರಿ ಬೆಳೆಸಬೇಕಿದೆ ಎಂದು ನುಡಿದರು.

ಮೂವರು ರೈತನಾಯಕರ ಕ್ಷೇತ್ರವನ್ನು ತುಂಬಿದ್ದ ಪುಟ್ಟಣ್ಣಯ್ಯ ಅವರು ಇಡೀ ಜೀವನವನ್ನು ರೈತರ ಅಭಿವೃದ್ಧಿಗೆ ಮೀಸಲಾಗಿಟ್ಟಿದ್ದರು. ಆ ಮೂಲಕ ಸರ್ವ ಜನಾಂಗದ ಪ್ರೀತಿ ಗಳಿಸಿದ್ದರು ಎಂದು ಹೇಳಿದರು. ಹಾವೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುರುಘಾಮಠದಿಂದ ಪುಟ್ಟಣ್ಣಯ್ಯನವರಿಗೆ ಡಿಸೆಂಬರ್‌ನಲ್ಲಿ ವಿಶೇಷ ಪ್ರಶಸ್ತಿ ನೀಡಿದ್ದೆವು. ಪ್ರಶಸ್ತಿಯಿಂದ ಬಂದ ಹಣವನ್ನು ಅನಾಥ ಮಕ್ಕಳಿಗೆ ನೀಡುವ ಮೂಲಕ ಹೃದಯ ವೈಶಾಲ್ಯತೆ ಪ್ರದರ್ಶಿಸಿದ್ದರು ಎಂದರು.

-ಉದಯವಾಣಿ

Comments are closed.