ಕರ್ನಾಟಕ

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಆದೇಶ ಹಿಂಪಡೆದ ಸರಕಾರ

Pinterest LinkedIn Tumblr


ಹಾಸನ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರ ವರ್ಗಾವಣೆ ಆದೇಶವನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿದೆ.

ಜನವರಿ 22 ರಂದು ರಾಜ್ಯ ಸರ್ಕಾರ 7 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು ಅದರಲ್ಲಿ ಎಂ.ವಿ ಜಯಂತಿ ಹಾಗೂ ವಿ. ಚೈತ್ರ ಅವರ ವರ್ಗಾವಣೆ ಹೊರತು ಪಡಿಸಿ ಉಳಿದ ಐವರ ವರ್ಗಾವಣೆ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ.

ಈ ಕುರಿತು ಮಾರ್ಚ್ 5 ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ತಿಳಿಸಲಾಗದೆ.

ಜನವರಿ 22 ರಂದು ಸರ್ಕಾರದ ಕಾರ್ಯದರ್ಶಿ ಎಂ.ವಿ ಜಯಂತಿ, ಆಹಾರ ಇಲಾಖೆ ಆಯುಕ್ತ ವಿ.ಚೈತ್ರ, ಅಂತರ್ಜಾಲ ಇಲಾಖೆ ನಿರ್ದೇಶಕ ಎಸ್.ಬಿ ಶೇಷಣ್ಣ, ಹಾವೇರಿ ಜಿಲ್ಲಾಧಿಕಾರಿ ಡಾ. ಎಂ.ವಿ ವೆಂಕಟೇಶ್, ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ, ಕಂದಾಯ ಇಲಾಖೆ ನಿರ್ದೇಶಕ ಹಾಗೂ ಉಪಕಾರ್ಯದರ್ಶಿ ಡಾ. ಕೆ.ರಾಜೇಂದ್ರ ಹಾಗೂ ರಾಮನಗರ ಜಿಲ್ಲಾಧಿಕಾರಿ ಡಾ. ಬಿ.ಆರ್ ಮಮತ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು.

Comments are closed.