ಕರ್ನಾಟಕ

ನಾನು ನರಹಂತಕ, ಭಯೋತ್ಪಾದಕ ಅಲ್ಲ, ಅದು ಬಿಜೆಪಿಯವರು!

Pinterest LinkedIn Tumblr


ಹೊಸದಿಲ್ಲಿ:’ನಾನು ನರಹಂತಕ, ಭಯೋತ್ಪಾದಕ ಅಲ್ಲ ಆ ಮಾತು ಬಿಜೆಪಿಗರಿಗೆ ಅನ್ವಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ನೈಸ್‌ ಸಂಸ್ಥೆ ಮಾಲೀಕ ಅಶೋಕ್‌ ಖೇಣಿ ಅವರ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಪ್ರತಿಕ್ರಿಯೆ ನೀಡಿ ‘ಖೇಣಿ ಅವರು ಜೈಲಿಗೇ ಹೋಗಿದ್ದಾರಾ ? ಜೈಲಿಗೆ ಹೋಗಿ ಬಂದಿರುವವರೆ ಬಿಜೆಪಿಯವರ ಮುಂದಿನ ಸಿಎಂ ಅಭ್ಯರ್ಥಿ.ಅವರ ಪಕ್ಷ ಸೇರ್ಪಡೆಯನ್ನು ಪ್ರಶ್ನಿಸುವ ನೈತಿಕತೆ ಬಿಜೆಪಿಯವರಿಗೆ ಇಲ್ಲ.’ ಎಂದು ತಿರುಗೇಟು ನೀಡಿದರು.

‘ನೈಸ್‌ ವಿಚಾರವೇ ಬೇರೆ ಅಶೋಕ್‌ ಖೇಣಿಯೇ ಬೇರೆ. ಹಾಗಂತ ನೈಸ್‌ ಅಕ್ರಮಗಳ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದನ್ನು ನಿಲ್ಲಿಸಲಾಗುವುದಿಲ್ಲ’ ಎಂದರು.

ನರಹಂತಕ ಸಿಎಂ!
ಮಂಗಳೂರಿನಲ್ಲಿ ಜನಸುರಕ್ಷಾ ಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಸಂಸದ ನಳಿನ್‌ ಕುಮಾರ್‌ ಕಟೀಲ್‌ ‘ನೀವು ನರಹಂತಕ ಹುಲಿ, ಸಿಂಹಗಳ ಬಗ್ಗೆ ಕೇಳಿದ್ದೀರಿ ಆದರೆ ಕರ್ನಾಟಕದಲ್ಲಿ ನರಹಂತಕ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

-ಉದಯವಾಣಿ

Comments are closed.