ಬೆಂಗಳೂರು: 2018ರ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು ಕಾಂಗ್ರೆಸ್ ಟಿಕೆಟ್ಗೆ ಭರ್ಜರಿ ಡಿಮ್ಯಾಂಡ್ ಬಂದಿದ್ದು ಮೂರೇ ದಿನದಲ್ಲಿ 800 ಅರ್ಜಿಗಳು ಖಾಲಿಯಾಗಿವೆ.
ಅರ್ಜಿ ಪಡೆಯಲು ಇನ್ನು ಮೂರುದಿನಗಳು ಬಾಕಿಯಿದ್ದು ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ. ಶಾಸಕ ಹ್ಯಾರಿಸ್ ಅವರ ಶಾಂತಿ ನಗರ ಕ್ಷೇತ್ರಕ್ಕೆ ಈಗಾಗಲೇ ಮೂರು ಜನರು ಅರ್ಜಿ ಪಡೆದಿದ್ದಾರೆ. ಆದರೆ, ಶಾಸಕ ಎನ್.ಎ.ಹ್ಯಾರಿಸ್ ಇನ್ನೂ ಪಡೆದಿಲ್ಲ.
ಸಿ.ವಿ. ರಾಮನ್ ಕ್ಷೇತ್ರದಲ್ಲಿ ಪಿ.ರಮೇಶ್ ಅರ್ಜಿ ಪಡೆದಿದ್ದಾರೆ. ಸಚಿವ ಎಚ್.ಸಿ.ಮಹದೇವಪ್ಪನವರ ಕ್ಷೇತ್ರದಿಂದ 3-4 ಜನರು ಅರ್ಜಿ ಪಡೆದಿದ್ದಾರೆ. ಘಟಾನುಘಟಿಗಳೇ ಅರ್ಜಿ ಪಡೆದಿದ್ದರಿಂದ ಸಚಿವರಿಗೆ ತಲೆನೋವು ಎದುರಾಗಿದೆ. ಇಲ್ಲಿಯವರೆಗೂ ಅರ್ಜಿ ಖರೀದಿಸಿದವರಲ್ಲಿ ಶೇ.90 ಜನರು ಹೊಸಬರೇ ಇದ್ದಾರೆ.
ಜೆಡಿಎಸ್ ಬಂಡಾಯ ಶಾಸಕರಿಗೆ ಶಾಕ್
ಇನ್ನು ಚಾಮರಾಜಪೇಟೆ ಕ್ಷೇತ್ರದಲ್ಲಿ ಬಂಡಾಯ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಇಲ್ಲಿ ಜಿ.ಎ.ಬಾವಾ ಅರ್ಜಿ ಖರೀದಿ ಮಾಡಿದ್ದಾರೆ. ಹಾಗೇ ಪುಲಕೇಶಿ ನಗರದಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಆಕಾಂಕ್ಷಿಯಾಗಿದ್ದು ಪ್ರಸನ್ನಕುಮಾರ್ ಅರ್ಜಿ ಪಡೆದರು.
ಅರ್ಜಿ ಪಡೆದ ಮುಖಂಡರು
ಸಚಿವರಾದ ಕೆ.ಜೆ.ಜಾರ್ಜ್, ಈಶ್ವರ ಖಂಡ್ರೆ, ಉಮಾಶ್ರೀ, ಡಿ.ಕೆ.ಶಿವಕುಮಾರ್, ಕೃಷ್ಣಭೈರೇಗೌಡ, ಶಾಸಕ ಎ.ಬಿ.ಮಾಲಕರೆಡ್ಡಿ, ಎನ್ಎಸ್ಯುಐ ಅಧ್ಯಕ್ಷ ಮಂಜು ಅರ್ಜಿ ಪಡೆದಿದ್ದಾರೆ.
Comments are closed.