ಬೆಂಗಳೂರು: ಮಹಿಳೆಯೊಬ್ಬರ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ತಮ್ಮನ್ನು ಕೈ ಬಿಡುವಂತೆ ಕೋರಿದ್ದ
ಅರ್ಜಿ ವಜಾಗೊಳಿಸಿರುವ ರಾಮನಗರ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಿಡದಿಯ ನಿತ್ಯಾನಂದ ಸ್ವಾಮಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ರಾಮನಗರ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಫೆ. 19ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ, ನಿತ್ಯಾನಂದ ಸ್ವಾಮಿ ಸೇರಿ ದಂತೆ ಪ್ರಕರಣದ 6 ಮಂದಿ ಆರೋಪಿಗಳು ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದಾರೆ. ನ್ಯಾ. ಆರ್.ಬಿ ಬೂದಿಹಾಳ್ ಅವರಿದ್ದ ಪೀಠ ವಾದ ಆಲಿಸಿ ವಿಚಾರಣೆ 2ಕ್ಕೆ ಮುಂದೂಡಿತು.
-ಉದಯವಾಣಿ
Comments are closed.