ಕರ್ನಾಟಕ

ರಸ್ತೆ ಉದ್ಘಾಟಿಸಲು ಬಂದ ಸಿಎಂಗೆ ಹ್ಯಾರಿಸ್‌ ಬಲ ಪ್ರದರ್ಶನ

Pinterest LinkedIn Tumblr


ಬೆಂಗಳೂರು: ಮಹಮದ್‌ ನಲಪಾಡ್‌ ಹಲ್ಲೆ ಪ್ರಕರಣದಿಂದ ತನ್ನ ಟಿಕೆಟ್‌ ಮೇಲೆಯೇ ಅನುಮಾನ ಹೊಂದಿರುವ ಕಾಂಗ್ರೆಸ್‌ ಶಾಸಕ ಎನ್‌.ಎ.ಹ್ಯಾರಿಸ್‌ ಅವರು ಇಂದು ಗುರುವಾರ ಶಾಂತಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಬಲ ಪ್ರದರ್ಶನ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಚರ್ಚ್‌ ರಸ್ತೆಯ ಉದ್ಘಾಟನೆಗೆ ಆಗಮಿಸಿದ್ದರು. ಸರ್ಕಾರಿ ಕಾರ್ಯಕ್ರಮವಾದರೂ ಶಾಂತಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹ್ಯಾರಿಸ್‌ ಅವರ ನೂರಾರು ಬೆಂಬಲಿಗರು ರಸ್ತೆಯ ಇಕ್ಕೆಲಗಳಲ್ಲಿ ಕಾಂಗ್ರೆಸ್‌ ಪಕ್ಷದ ಬಾವುಟಗಳನ್ನು ಹಿಡಿದುಕೊಂಡು ಜೈಕಾರಗಳನ್ನು ಹಾಕಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮದ ಒತ್ತಡದಿಂದಾಗಿ
ವೇದಿಕೆಗೆ ತೆರಳದೆ ನೇರವಾಗಿ ಮುಂದಿನ ಕಾರ್ಯಕ್ರಮಕ್ಕೆ ತೆರಳಿದರು.

ಚರ್ಚ್‌ ಸ್ಟ್ರೀಟನ್ನು ನೋ ಪಾರ್ಕಿಂಗ್‌ ಮಾಡಿ

ಹೊಸ ರಸ್ತೆಯನ್ನು ಸಂಪೂರ್ಣವಾಗಿ ನೋ ಪಾರ್ಕಿಂಗ್‌ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್‌ ಅಧಿಕಾರಿ ಹಿತೇಂದ್ರ ಅವರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಹ್ಯಾರಿಸ್‌ ಸ್ಪಷ್ಟೀಕರಣ !
ಸಿಎಂ ಸಿದ್ದರಾಮಯ್ಯ ವೇದಿಕೆಗೆ ಬರದೇ ಇದ್ದುದು ‘ಹ್ಯಾರಿಸ್‌ ಜೊತೆ ವೇದಿಕೆ ಹಂಚಿಕೊಳ್ಳದ ಸಿಎಂ’ ಎಂದು ಭಾರೀ ಸುದ್ದಿಯಾದ ಕಾರಣ ಸ್ಪಷ್ಟೀಕರಣ ನೀಡಿದ ಹ್ಯಾರಿಸ್‌ ‘ಸಿಎಂ ಅವರು ಪಾವಗಡದ ಕಾರ್ಯಕ್ರಮಕ್ಕೆ ತೆರಳಬೇಕಾದುದರಿಂದ ವೇದಿಕೆಗೆ ಬರಲಿಲ್ಲ ಹೊರತು ಬೇರೆ ಯಾವುದೇ ಕಾರಣಗಳಿಲ್ಲ’ ಎಂದರು.

-ಉದಯವಾಣಿ

Comments are closed.