ತುಮಕೂರು: ಹಣ ದ್ವಿಗುಣಗೊಳಿಸುವ ಆಮಿಷ ತೋರಿಸಿ ಜನರಿಂದ ಕೋಟ್ಯಾಂತರ ರು. ಹಣ ಪಡೆದು ದಂಪತಿ ಪರಾರಿಯಾದ ಘಟನೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದಲ್ಲಿ ನಡೆದಿದೆ.
ಹಣ ಕಳೆದುಕೊಂಡ ಮಹಿಳೆಯರು ನಾಪತ್ತೆಯಾದ ದಂಪತಿ ಮನೆ ಮುಂದೆ ಮಣ್ಣು ತೂರಿ, ಪೊರಕೆ ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಮಲಾ ಹಾಗೂ ನಾಗೇಶ್ ಎಂಬವರೇ ನಾಪತ್ತೆಯಾದವರು. ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದಲ್ಲಿ ಯೂನಿಟಿ ಮಾರ್ಟ್ ಎನ್ನುವ ಅಂಗಡಿ ಪ್ರಾರಂಭಿಸಿ ದ್ದ ಸುಗ್ಗನಹಳ್ಳಿಯ ನಿರ್ಮಲಾ ಹಾಗೂ ನಾಗೇಶ್ ದಂಪತಿ ಹಣ ದ್ವಿಗುಣಗೊ ಳಿಸುವುದಾಗಿ ನಂಬಿಸಿ, ವಂಚಿಸಿ ಪರಾರಿಯಾಗಿದ್ದಾರೆ. ಒಬ್ಬರಿಂದ 2 ಸಾವಿರ ಹಣ ಪಡೆದು ತಿಂಗಳೊಳಗೆ 4 ಸಾವಿರ ಹಣ ಮರಳಿಸುವುದಾಗಿ ಹೇಳಿದ್ದರು. ಅಂತೆಯೇ ಕೆಲವರಿಗೆ ಹಣ ನೀಡಿ ನಂಬಿಸಿದ್ದರು.
ಇದನ್ನು ನಂಬಿ ಸುಗ್ಗನಹಳ್ಳಿ, ಬಂಡೀಹಳ್ಳಿ, ದೊಡ್ಡಕೊಪ್ಪಲು, ಕಿರಂಗೂರು ಸೇರಿ ಹತ್ತಾರು ಹಳ್ಳಿಯ ಮಹಿಳೆಯರು ಹಣ ಹಾಕಿ ಇದೀಗ ಕಳೆದುಕೊಂಡಿದ್ದಾರೆ. ಕೆಲವು ಮಹಿಳೆಯರು ತಮ್ಮ ಒಡವೆಗಳನ್ನು ಒತ್ತೆ ಇಟ್ಟು ಹಣ ಕಳೆದುಕೊಂಡು ಕಣ್ಣೀರು ಹಾಕು ತ್ತಿದ್ದಾರೆ. ಕೆಲ ಮಹಿಳೆಯರನ್ನು ಗಂಡಂದಿರು ಹಣ ತರುವವರೆಗೂ ಮನೆಗೆ ಬಾರದಂತೆ ತವರಿಗೆ ಕಳುಹಿಸಿದ್ದಾರೆ.
ಸುಮಾರು 10 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.